LatestNationalPoliticsTech

*ಎಐ ಇಂಪ್ಯಾಕ್ಟ್​ ಶೃಂಗ ಸಭೆಗೆ ಚಾಲನೆ: ಎಐ ಬಳಕೆ ಜವಾಬ್ದಾರಿಯಿಂದ ಕೂಡಿರಬೇಕು: ಪ್ರಧಾನಿ ಮೋದಿ*

ಪ್ರಗತಿವಾಹಿನಿ ಸುದ್ದಿ: ನವದೆಹಲಿಯ ಭಾರತ್ ಮಂಟಪದಲ್ಲಿ ಎಐ ಇಂಪ್ಯಾಕ್ಟ್​ ಶೃಂಗ ಸಭೆಗೆ ಚಾಲನೆ ದೊರೆತಿದೆ. ವಿಶ್ವದ ಅನೇಕ ನಾಯಕುಗಳು ಈ ಶೃಂಗಸಭೆಯಲ್ಲಿ ಭಾಗಿಯಾಗಿದ್ದಾರೆ. ಎಐ ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಎಐ ಎಂದರೆ ಕೆಲವರಿಗೆ ಭಯ ಕೆಲವರು ಅದು ನಮ್ಮ ಭಾಗ್ಯವೆಂದು ಪರಿಗಣಿಸುತ್ತಾರೆ. ನಾನು ಕೂಡ ಹೆಮ್ಮೆಯಿಂದ ಹೇಳುತ್ತೇನೆ, ನಮಗೆ ಎಐ ಎಂದರೆ ಭಯ ಇಲ್ಲ, ಭಾರತದ ಭವಿಷ್ಯ ಕಾಣುತ್ತೆ ಎಂದು ತಿಳಿಸಿದ್ದಾರೆ.

ಎಐ ಇಂಪ್ಯಾಕ್ಟ್​ ಶೃಂಗಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮೂರು ಭಾರತೀಯ ಕಂಪನಿಗಳು ಎಐ ಮಾಡೆಲ್ ಆ್ಯಪ್ ಲಾಂಚ್ ಮಾಡಿದ್ದಾರೆ. ಈ ಮಾಡೆಲ್​ಗಳು ಯುವಕರ ಟ್ಯಾಲೆಂಟ್ ಏನಿದೆ ಎಂಬುದನ್ನು ತೋರಿಸುತ್ತದೆ. ಕೆಲವರು ಎಐ ಮುಂದಿಟ್ಟುಕೊಂಡು ಜಗತ್ತನ್ನೇ ಆಳುವ ಮನಸ್ಥಿತಿಯಲ್ಲಿದ್ದಾರೆ. ಆದರೆ ಭಾರತ ಅದನ್ನು ಭವಿಷ್ಯವೆಂದಷ್ಟೇ ಪರಿಗಣಿಸುತ್ತಿದೆ ಎಂದರು.

Home add -Advt

ಯಂತ್ರ ಕಲಿಕೆಯಿಂದ ಕಲಿಕೆ ಯಂತ್ರದವರೆಗೆ, ಅಂದರೆ ಯಂತ್ರವನ್ನು ಮನುಷ್ಯನೇ ನಡೆಸಬೇಕು. ನಾವು ದೊಡ್ಡ ದೃಷ್ಟಿಕೋನವನ್ನು ಹೊಂದಿರಬೇಕು ಮತ್ತು ಅಷ್ಟೇ ದೊಡ್ಡ ಜವಾಬ್ದಾರಿಯನ್ನು ಹೊರಬೇಕು. ಭವಿಷ್ಯದ ಪೀಳಿಗೆಗೆ ನಾವು ಯಾವ ರೀತಿಯ AI ಅನ್ನು ಬಿಟ್ಟುಬಿಡುತ್ತೇವೆ ಎಂಬುದರ ಬಗ್ಗೆಯೂ ನಾವು ಕಾಳಜಿ ವಹಿಸಬೇಕಾಗಿದೆ. ಆದ್ದರಿಂದ, ಇಂದಿನ ನಿಜವಾದ ಪ್ರಶ್ನೆಯೆಂದರೆ ಕೃತಕ ಬುದ್ಧಿಮತ್ತೆ ಭವಿಷ್ಯದಲ್ಲಿ ಏನು ಮಾಡಬಹುದು ಎಂಬುದು ಅಲ್ಲ, ಆದರೆ ವರ್ತಮಾನದಲ್ಲಿ ನಾವು ಅದನ್ನು ಬಳಸಿಕೊಂಡು ಏನು ಮಾಡುತ್ತೇವೆ ಎಂಬುದು ನಿಜವಾದ ಪ್ರಶ್ನೆ. ಅತ್ಯಂತ ಶಕ್ತಿಶಾಲಿ ಉದಾಹರಣೆಯೆಂದರೆ ಪರಮಾಣು ಶಕ್ತಿ. ಅದರ ವಿನಾಶ ಮತ್ತು ಅದರ ಸಕಾರಾತ್ಮಕ ಕೊಡುಗೆಯನ್ನು ನಾವು ನೋಡಿದ್ದೇವೆ. ಎಐ ಕೂಡ ಒಂದು ಪರಿವರ್ತಕ ಶಕ್ತಿಯಾಗಿದೆ ಎಂದರು.

ಎಐ ಬಳಕೆ ಜವಾಬ್ದಾರಿಯಿಂದ ಕೂಡಿರಬೇಕು, ಪಾರದರ್ಶಕತೆ ಮತ್ತು ದೃಢೀಕರಣ ಅತ್ಯಗತ್ಯ ಎಂದು ಪ್ರತಿಪಾದಿಸಿದರು.


Related Articles

Back to top button