Belagavi NewsBelgaum NewsHealthKannada NewsKarnataka News
*ಬೆಳಗಾವಿಗೆ ಆಗಮಿಸಲಿದ್ದಾರೆ ನಿಸರ್ಗಮನೆ ಖ್ಯಾತಿಯ ಡಾ.ವೆಂಕಟರಮಣ ಹೆಗಡೆ*

ಪ್ರಗತಿವಾಹಿನಿ ಸುದ್ದಿ: ಬೆಳಗಾವಿ: ಶಿರಸಿ ವೇದ ವೆಲ್ನೆಸ್ ಸೆಂಟರ್ ಹಾಗೂ ನಿಸರ್ಗಮನೆ ಖ್ಯಾತ ವೈದ್ಯರಾದ ಡಾ. ವೆಂಕಟರಮಣ ಹೆಗಡೆ ಅವರು ಬೆಳಗಾವಿಗೆ ಭೇಟಿ ನೀಡಲಿದ್ದಾರೆ.
ಮಾರ್ಚ್ 14 ಮತ್ತು 15ರಂದು ಬೆಳಗಾವಿಯ ಹೊಟೇಲ್ ಹೆರಿಟೇಜ್ (ಸೇಂಟ್ ಝೇವಿಯರ್ಸ್ ಶಾಲೆಯ ಎದುರು) ಗೆ ಭೇಟಿ ನೀಡಿ ವಿವಿಧ ಆರೋಗ್ಯ ಸಮಸ್ಯೆಗಳ ಕುರಿತು ಸಲಹೆ ಹಾಗೂ ಮಾರ್ಗದರ್ಶನ ನೀಡಲಿದ್ದಾರೆ.
ಈ ವೇಳೆ “ಮನೆಯಲ್ಲೇ ಪರಿಹಾರ”, “ಆಹಾರ ಆರೋಗ್ಯ”, “ಪವರ್ ಡಿಟಾಕ್ಸ್” ಹಾಗೂ “ಅಡುಗೆ ಮನೆಯಲ್ಲಿ ಅಸ್ತಿತ್ವ ಆರೋಗ್ಯವೇ ಔಷಧಿ” ಮುಂತಾದ ವಿಷಯಗಳ ಕುರಿತ ಪುಸ್ತಕಗಳು ಕೂಡ ಸಿಗಲಿವೆ.
ಆರೋಗ್ಯ ಸಮಸ್ಯೆಗಳ ಕುರಿತು ತಜ್ಞ ವೈದ್ಯರಿಂದ ಸಲಹೆ ಪಡೆಯಲು ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 9632867180 ಹಾಗೂ 9353981093 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




