Belagavi NewsBelgaum NewsKannada NewsKarnataka NewsLatest
* ಬೆಳಗಾವಿ ನಗರದಲ್ಲಿ 15 ಅಡಿ ಎತ್ತರದ ಸಾಂಸ್ಕೃತಿಕ ನಾಯಕ ಬಸವಣ್ಣನವರ ಪ್ರತಿಮೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜನತೆಯ ಬಹು ದಿನಗಳ ನಿರೀಕ್ಷೆಯಾಗಿದ್ದ ವಿಶ್ವಗುರು ಬಸವಣ್ಣನವರ 15 ಆಡಿ ಎತ್ತರದ ಕಂಚಿನ ಪ್ರತಿಮೆ ಇಂದು ಬೆಳಗಾವಿ ನಗರದ ಹೃದಯಭಾಗ ಬಸವೇಶ್ವರ ವೃತ್ತಕ್ಕೆ ಆಗಮಿಸಿದೆ.
ಬಸವಣ್ಣನವರ ಪ್ರತಿಮೆಯನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಈ ವೇಳೆ ಮಾಜಿ ಸಂಸದ ಪ್ರಭಾಕರ್ ಕೋರೆ, ಎಂ ಬಿ ಜಿರಲಿ, ಮುರಗೇಂದ್ರಗೌಡ ಪಾಟೀಲ್, ರತ್ನಪ್ರಭಾ ಬೆಲ್ಲದ ಇದ್ದರು. ಕೆಲ ದಿನಗಳ ಬಳಿಕ ಪ್ರತಿಮೆ ಅಧಿಕೃತವಾಗಿ ಲೋಕಾರ್ಪಣೆಗೊಳ್ಳಲಿದೆ.



