ಕರೋನಾ ವೈರಸ್ ಗೆ ಔಷಧ ಕಂಡು ಹಿಡಿದ ಹಿಂದೂ ಮಹಾಸಭಾ ಅಧ್ಯಕ್ಷ

ಪ್ರಗತಿವಾಹಿನಿಸುದ್ದಿ; ನವದೆಹಲಿ: ಕೊರೋನಾ ವೈರಸ್​​ಗೆ ಚೀನಾದಲ್ಲಿ ಈವರೆಗೆ 300ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ವಿಶ್ವಾದ್ಯಂತ ಹರಡುತ್ತಿರುವ ಕೊರಾನಾ ವೈರಸ್ ಆತಂಕದ ವಾತಾವರಣ ಸೃಷ್ಠಿಸಿದೆ. ಈನಡುವೆ ವೈದ್ಯಲೋಕಕ್ಕೆ ಸವಾಲೆನಿಸಿರುವ ಈ ಕೊರೊನಾ ವೈರಸ್​​​ಗೆ ಹಿಂದೂ ಮಹಾಸಭಾದ ಅಧ್ಯಕ್ಷರು ಔಷಧಿಯೊಂದನ್ನು ಕಂಡುಹಿಡಿದಿದ್ದಾರೆ.

ಭಾರತದಲ್ಲಿ ದೇವರೆಂದು ಪೂಜಿಸಲ್ಪಡುವ ಗೋಮಾತೆಯ ಮೂತ್ರ ಮತ್ತು ಸಗಣಿ ಕೊರೊನಾ ವೈರಸ್​​ನಿಂದ ಬಳಲುತ್ತಿರುವವರಿಗೆ ಸೂಕ್ತ ಔಷಧಿಯಾಗಿದೆ ಎಂದು ಹಿಂದೂ ಮಹಾಸಭಾ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜ್​ ಅಭಿಪ್ರಾಯಪಟ್ಟಿದ್ದಾರೆ. ಜೊತೆಗೆ ಕೊರೊನಾ ವೈರಸ್​​ನ್ನು ಕೊಲ್ಲಲು ವಿಶೇಷ ಯಜ್ಞವನ್ನು ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.

Home add -Advt

ಗೋ ಮೂತ್ರ ಮತ್ತು ಸಗಣಿಯನ್ನು ಸೇವಿಸಿದರೆ ಕೊರೊನಾ ಸೋಂಕಿನಿಂದ ಉಂಟಾಗುವ ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ. ‘ಓಂ ನಮಃ ಶಿವಾಯ’ ಮಂತ್ರವನ್ನು ಜಪಿಸಿ ಸೋಂಕು ತಗುಲಿರುವ ವ್ಯಕ್ತಿಯ ದೇಹದ ಮೇಲೆ ಗೋವಿನ ಸಗಣಿ ಹಚ್ಚಿದರೆ ಆತನನ್ನು ಕಾಪಾಡಬಹುದಾಗಿದೆ. ಈ ಮಾರಾಣಾಂತಿಕ ಕೊರೊನಾ ವೈರಸ್​​ನ್ನು ನಾಶ ಮಾಡಲು ಶೀಘ್ರದಲ್ಲೇ ವಿಶೇಷ ಯಜ್ಞವನ್ನು ನಡೆಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಈ ನಡುವೆ ಕೊರೊನಾ ವೈರಸ್​​ ಗುಣಪಡಿಸಲು ಮಹಾರಾಜ್​ ನೀಡಿರುವ ಸಲಹೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟ್ರೋಲ್​ ಆಗುತ್ತಿದೆ. ಗೋ ಮೂತ್ರದಿಂದ ಕೊರೊನಾ ವೈರಸ್​​ ಹೇಗೆ ವಾಸಿಯಾಗುತ್ತದೆ ಎಂಬುದು ನೆಟ್ಟಿಗರ ಪ್ರಶ್ನೆ..

ಚೀನಾದಲ್ಲಿ ಈವರೆಗೆ 304 ಮಂದಿ ಕೊರೊನಾ ವೈರಸ್​​ಗೆ ಬಲಿಯಾಗಿದ್ದಾರೆ. ಸುಮಾರು 9,692 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಹುವಾಯಿ ಪ್ರಾಂತ್ಯ ಒಂದರಲ್ಲೇ 5,806 ಪ್ರಕರಣಗಳು ಪತ್ತೆಯಾಗಿವೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ಕೊರೊನಾ ವೈರಸ್​​ ಭೀತಿ ಹಿನ್ನೆಲೆ, ವಿಶ್ವ ಆರೋಗ್ಯ ಸಂಸ್ಥೆಯು ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಜಾಗತಿಕ ಆರೋಗ್ಯ ತುರ್ತುಸ್ಥಿತಿಯನ್ನು ಘೋಷಿಸಿದೆ.

ಭಾರತ, ಬ್ರಿಟನ್​, ಅಮೆರಿಕ, ದಕ್ಷಿಣ ಕೊರಿಯಾ, ಜಪಾನ್​ ಮತ್ತು ಫ್ರಾನ್ಸ್​​ ಸೇರಿದಂತೆ ಸುಮಾರು 20 ದೇಶಗಳಲ್ಲಿ ಕೊರೊನಾ ವೈರಸ್​​​ ಪ್ರಕರಣಗಳು ಪತ್ತೆಯಾಗಿರುವುದು ದೃಢಪಟ್ಟಿದೆ. ನಿನ್ನೆ ಚೀನಾದಿಂದ 324 ಭಾರತೀಯರನ್ನು ಏರ್​ ಇಂಡಿಯಾ ವಿಮಾನದ ಮೂಲಕ ಭಾರತಕ್ಕೆ ಸ್ಥಳಾಂತರಿಸಲಾಗಿತ್ತು. ಇಂದು ಮತ್ತಷ್ಟು ಭಾರತೀಯರನ್ನು ವುಹಾನ್​ನಿಂದ ದೆಹಲಿಗೆ ಕರೆತರಲಾಗಿದೆ.

Related Articles

Back to top button