
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಜಿಲ್ಲೆಯಲ್ಲಿ ಅತಿವೃಷ್ಟಿ ಹಾಗೂ ಪ್ರವಾಹದಿಂದ ಹಾನಿಗೊಳಗಾಗಿರುವ ವಿವಿಧ ಪ್ರದೇಶಗಳಿಗೆ ಕೇಂದ್ರ ಅಧ್ಯಯನ ತಂಡವು ಮಂಗಳವಾರ (ಸೆ.8) ಭೇಡಿ ನೀಡಿ ಪರಿಶೀಲಿಸಲಿದೆ.
ಹುಕ್ಕೇರಿ, ಗೋಕಾಕ ಮತ್ತು ಸವದತ್ತಿ ತಾಲ್ಲೂಕಿನಲ್ಲಿ ಅತಿವೃಷ್ಟಿಯಿಂದ ಉಂಟಾಗಿರುವ ವಿವಿಧ ಬೆಳೆಗಳ ಹಾನಿ ಮತ್ತು ಮೂಲಸೌಕರ್ಯಗಳ ಹಾನಿಯನ್ನು ತಂಡ ಪರಿಶೀಲಿಸಲಿದೆ.