![LaxmiTai 5](https://pragativahini.com/wp-content/uploads/2024/06/Laxmi-Tai-add-5.jpg)
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ ಬೆನಕೆ ತಮ್ಮ ಶಾಸಕರ ಸ್ಥಳೀಯ ಪ್ರದೇಶಾಭಿವೃಧ್ದಿ ನಿಧಿಯಡಿಯಲ್ಲಿ ಬೆಳಗಾವಿಯ ಶಾಹು ನಗರದ ವಿವಿಧೆಡೆ ರೂ. ೨೦. ಲಕ್ಷಗಳಲ್ಲಿ ಪೇವರ್ಸ ಅಳವಡಿಕೆ ಕಾಮಗಾರಿಯನ್ನು ಕೈಗೊಳ್ಳಲು ಭೂಮಿ ಪೂಜೆಯನ್ನು ನೆರವೇರಿಸಿದರು.
![Emergency Service](https://pragativahini.com/wp-content/uploads/2023/06/IMG-20221115-WA0034.jpg)
ಭೂಮಿ ಪೂಜೆಯನ್ನು ನಡೆಸಿ ಮಾತನಾಡಿದ ಶಾಸಕರು, ಮತಕ್ಷೇತ್ರದ ವ್ಯಾಪ್ತಿಯ ಶಾಹುನಗರದ ಹಲವೆಡೆ ಶಾಸಕರ ಸ್ಥಳೀಯ ಪ್ರದೇಶಾಭಿವೃಧ್ದಿ ನಿಧಿಯಡಿಯ ರೂ.೨೦ ಲಕ್ಷಗಳಲ್ಲಿ ಪೇವರ್ಸ ಅಳವಡಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಗುತ್ತಿಗೆದಾರರು ನಿಗದಿತ ಸಮಯದಲ್ಲಿ ಪೇವರ್ಸ ಅಳವಡಿಸಬೇಕೆಂದು ತಿಳಿಸಿದರು. ನಗರದಲ್ಲಿ ಕೈಗೊಳ್ಳಬೇಕಾಗಿರುವ ಬಾಕಿ ಕಾಮಗಾರಿಗಳನ್ನು ಕೈಗೊಂಡು ನಗರದ ಅಭಿವೃಧ್ದಿಗೆ ಶ್ರಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಸಹಾಯಕ ಅಭಿಯಂತರ ಬ್ರಹ್ಮಾನಂದ ದೇಸಾಯಿ, ಬಿ.ಜೆ.ಪಿ. ಮುಖಂಡರುಗಳಾದ ವಿಜಯ ಕೊಡಗನೂರ, ಶ್ರೇಯಸ್ ನಾಕಾಡಿ, ಶ್ರೀಧರ ಮಾಳಗೆ, ಮಂಜುನಾಥ ಪಮ್ಮಾರ, ಪವನ ತವಕರಿ, ವಿನಾಯಕ ಮಾದಲಬಾವಿ, ರವಿ ಬಾಗಿ, ಶಂಕರ ಚೌಗೆ, ಜಯಂತ ಚೌಗೆ, ಜೆ.ಡಿ. ಪಾಟೀಲ, ಶಿವಪ್ರಸಾದ ತಳವಾರ, ಗುತ್ತಿಗೆದಾರರಾದ ವಿಕಾಸ ಗಾಂಧಿ ಮತ್ತು ಪರಶುರಾಮ ಹಾಗೂ ಕಾರ್ಯಕರ್ತರು ಸ್ಥಳೀಯರು ಉಪಸ್ಥಿತರಿದ್ದರು.