Latest

ಸೇತುವೆಯಿಂದ ನದಿಗೆ ಉರುಳಿದ ವಾಹನ; 7 ಜನರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಮಂಡಿ: ದೇಶದಲ್ಲಿ ಒಂದೆಡೆ ದೀಪಾವಳಿ ಹಬ್ಬದ ಸಂಭ್ರಮ ಮನೆಮಾಡಿದ್ದರೆ, ಮತ್ತೊಂದೆಡೆ ಹಲವು ದುರಂತಗಳು ಸಂಭವಿಸುತ್ತಿವೆ., ಬೆಂಕಿ ಅವಘಡ, ಅಪಘಾತಗಳ ಸಂಖ್ಯೆ ಹೆಚ್ಚಿದ್ದು, ಇದೀಗ ವಾಹನವೊಂದು ಸೇತುವೆ ಮೇಲಿಂದ ನದಿಗೆ ಉರುಳಿದ ಪರಿಣಾಮ 7 ಜನರು ಸಾವನ್ನಪ್ಪಿರುವ ಘಟನೆ ಹಿಮಾಚಲ ಪ್ರದೇಶದಲ್ಲಿ ನಡೆದಿದೆ.

ಇಲ್ಲಿನ ಮಂಡಿ ಜಿಲ್ಲೆಯ ಫುಲ್ ಘ್ರಾಟ್ ಪ್ರದೇಶದಲ್ಲಿ ವಾಹನವೊಂದು ಬ್ರಿಡ್ಜ್ ಮೇಲಿಂದ ಉರುಳಿ ಸುಖೇತಿ ಖಾಡ್ ಎಂಬ ನದಿಗೆ ಬಿದ್ದಿದೆ. ಮುಂಜಾನೆ 3 ಗಂಟೆ ಸುಮಾರಿಗೆ ಈ ದುರಂತ ಸಂಭವಿಸಿದೆ. ಘಟನೆಯಲ್ಲಿ 7 ಜನ ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ.

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button