Latest

ಅಪಘಾತ; ಪತಿ- ಪತ್ನಿ ಸೇರಿ ಸವದತ್ತಿಯ ಮೂವರ ದುರ್ಮರಣ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಕಾರು ಹಾಗೂ ಲಾರಿ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಸಾವನ್ನಪ್ಪಿರುವ ಘಟನೆ ಧಾರವಾಡ ಜಿಲ್ಲೆಯ ಸವದತ್ತಿ ಬಳಿ ನಡೆದಿದೆ.

Home add -Advt

ಮೃತರನ್ನು ನಾಗರಾಜ ಇಚ್ಚಂಗಿ (30), ವಿಜಯಾ (42) ಹಾಗೂ ರೇವಣಸಿದ್ದೇಶ್ವರ ಇಚ್ಚಂಗಿ (46) ಎಂದು ಗುರುತಿಸಲಾಗಿದೆ.

ರೇವಣಸಿದ್ದೇಶ್ವರ ಎಂಬುವವರಿಗೆ ಡಯಾಲಿಸಿಸ್ ಮಾಡಿಸಲೆಂದು ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಕಾರು ಹಾಗೂ ಲಾರಿ ಎರಡೂ ವಾಹನಗಳ ಚಾಲಕರಿಗೆ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ.

Related Articles

Back to top button