Latest

ಉತ್ತರಾಖಂಡ್ ದುರಂತ; ರಕ್ಷಣಾ ಕಾರ್ಯಾಚರಣೆ ನೇತೃತ್ವ ವಹಿಸಿರುವ ರಾಜ್ಯದ ಮಹಿಳಾ ಅಧಿಕಾರಿ

ಪ್ರಗತಿವಾಹಿನಿ ಸುದ್ದಿ; ಡೆಹ್ರಾಡೂನ್: ಉತ್ತರಾಖಂಡ್ ನ ಚಮೋಲಿ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತದಿಂದ ಉಂಟಾದ ಭೀಕರ ಪ್ರವಾಕ್ಕೆ ಸಿಲುಕಿ ಮೃತಪಟ್ಟವರ ಸಂಖ್ಯೆ 31ಕ್ಕೆ ಏರಿಕೆಯಾಗಿದ್ದು, ದುರಂತದಲ್ಲಿ 170 ಜನರು ಕಣ್ಮರೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

ಭಾರತ-ಟಿಬೇಟ್ ಗಡಿ ಭದ್ರತಾಪಡೆ ಯೋಧರು ಸೇರಿದಂತೆ ಹಲವು ಭದ್ರತಾ ಪಡೆಗಳಿಂದ ಕಾರ್ಯಾಚರಣೆ ನಡೆದಿದ್ದು, ಭಾರತ-ಟಿಬೇಟ್ ಗಡಿ ಭದ್ರತಾಪಡೆ ನೇತೃತ್ವವನ್ನು ರಾಜ್ಯದ ಮಹಿಳಾ ಅಧಿಕಾರಿ ವಹಿಸಿರುವುದು ವಿಶೇಷ. ಡಿಐಜಿ ಅಪರ್ಣಾ ಕುಮಾರ್ ಉತ್ತರಾಖಂಡ್ ನಲ್ಲಿ ರಕ್ಷಣಾ ಕಾರ್ಯಾಚರಣೆ ನೇತೃತ್ವವಹಿಸಿದ್ದು, ಇವರು ಮೂಲತ: ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ.

Related Articles

ಅಪರ್ಣಾ ಕುಮಾರ್ 2002ನೇ ಸಾಲಿನ ಐಪಿಎಸ್ ಅಧಿಕಾರಿ. ದುರಂತ ಕುರಿತು ವರದಿಗೆ ತೆರಳಿರುವ ಕನ್ನಡ ಸುದ್ದಿವಾನಿಗಳ ಜೊತೆ ರಕ್ಷಣಾ ಕಾರ್ಯಾಚರಣೆ ಬಗ್ಗೆ ಅರ್ಪಣಾ ಕನ್ನಡದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button