Kannada NewsKarnataka News

ಬೆಳಗಾವಿ ಮರಾಠಿಗರಿಗೆ ಆಕ್ಸಿಜನ್ ಪೂರೈಕೆ ಆರಂಭಿಸಿದ ಮಹಾರಾಷ್ಟ್ರ ಶಿವಸೇನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿಯಲ್ಲಿ ಮತ್ತೆ ರಾಜಕೀಯ ಶುರುಮಾಡಲು ಹವಣಿಸುತ್ತಿರುವ ಶಿವಸೇನೆ – ಎಂಇಎಸ್ ಇದೀಗ ಮರಾಠಾ ಭಾಷಿಕ ಕೊರೋನಾ ಸೋಂಕಿತರಿಗಾಗಿ ಆಕ್ಸಿಜನ್ ಪೂರೈಕೆ ಆರಂಭಿಸಿದೆ.

ಮಹಾರಾಷ್ಟ್ರ ಗಡಿ ಸಮನ್ವಯ ಸಚಿವ ಏಕನಾಥ ಶಿಂಧೆ ಬೆಳಗಾವಿ ಮರಾಠಿಗರಿಗಾಗಿ 2 ಆಕ್ಸಿಜನ್ ಕಾನ್ಸಂಟ್ರೇಟರ್ ಗಳನ್ನು ಪೂರೈಸಿದ್ದು, ಇನ್ನೂ 8 ಪೂರೈಸುವುದಾಗಿ ತಿಳಿಸಿದ್ದಾರೆ ಎಂದು ಎಂಇಎಸ್ ಮುಖಂಡ ಶುಭಂ ಶೇಳಕೆ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲಾಡಳಿತ ಇಲ್ಲಿಯ ಎನ್ ಜಿ ಓ ಗಳಿಗೆ  ಆಕ್ಸಿಜನ್ ಪೂರೈಕೆ ಸ್ಥಗಿತಗೊಳಿಸಿದ್ದರಿಂದ ಸಮಸ್ಯೆಯಾಗಿದೆ. ಹಾಗಾಗಿ ಮಹಾರಾಷ್ಟ್ರದ ನೆರವು ಪಡೆಯಲಾಗಿದೆ ಎಂದು ಅವರು ಹೇಳಿದ್ದಾರೆ.

ಶುಭಂ ಶೇಳಕೆ ಕಳೆದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ 1.24 ಲಕ್ಷದಷ್ಟು ಮತಗಳನ್ನು ಪಡೆದಿದ್ದಾರೆ. ಈ ಹಿನ್ನೆಲೆಯಲ್ಲಿ ಬರಲಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಮೇಲೆ ಶಿವಸೇನೆ – ಎಂಇಎಸ್ ಮೈತ್ರಿಕೂಟ ಕಣ್ಣಿಟ್ಟಿದೆ. ಹಾಗಾಗಿ ಇದೀಗ ಮರಾಠಿ ಭಾಷಿಕರಿಗೆ ಆಕ್ಸಿಜನ್ ಪೂರೈಸುವ ಮೂಲಕ ಅನುಕಂಪ ಗಿಟ್ಟಿಸಲು ಮುಂದಾಗಿದೆ.

Home add -Advt

ಈಗಾಗಲೆ ಮರಾಠಿ ಭಾಷಿಕರು ಹೆಚ್ಚಾಗಿರುವ ಖಾಸಗಿ ಕೊರೋನಾ ಕೇರ್ ಸೆಂಟರ್ ಗಳಲ್ಲಿ ಆಕ್ಸಿಜನ್ ಪೂರೈಸಲು ನಿರ್ಧರಿಸಿದೆ.

ವಾಹನ ಬಳಸಲು ಅನುಮತಿ ನೀಡಿದ ಸರಕಾರ

ಪ್ರದೀಪ ತೇಲಸಂಗ ನಿಧನ

 

Related Articles

Back to top button