ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಾಜಿ ಶಾಸಕ ಪರಶುರಾಮ ಬಾವು ನಂದಿಹಳ್ಳಿ ಪುತ್ರ ಅರುಣ ಅವರನ್ನು ಮಂಗಳವಾರ ರಾತ್ರಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ.
ರಾತ್ರಿ 10 ಗಂಟೆ ಹೊತ್ತಿಗೆ ದಾಮಣೆ ಸಮೀಪ ಈ ಘಟನೆ ನಡೆದಿದೆ. ಅರುಣ ವಿಶ್ವಭಾರತ ಶಿಕ್ಷಣ ಸಂಸ್ಥೆ ನಡೆಸುತ್ತಿದ್ದರು.
ಕಾರಿನಲ್ಲಿ ಬರುತ್ತಿರುವಾಗ ಅಡ್ಡಗಟ್ಟಿ ಗುಂಡು ಹಾರಿಸಲಾಗಿದೆ.