Latest

ತಾಯ್ನಾಡಿಗೆ ಬಂದಿಳಿದ 120 ಭಾರತೀಯರು

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಅಪ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದಿರುವ ಬೆನ್ನಲ್ಲೇ ಭಾರತೀಯ ರಾಯಭಾರ ಕಚೇರಿಯ ಸಿಬ್ಬಂದಿಗಳು, ಪತ್ರಕರ್ತರು ಸೇರಿದಂತೆ 150 ಜನರನ್ನು ರಕ್ಷಿಸಲಾಗಿದ್ದು, ಸುರಕ್ಷಿತವಾಗಿ ತಾಯ್ನಾಡಿಗೆ ಆಗಮಿಸಿದ್ದಾರೆ.

ಕಾಬೂಲ್ ನ ಹಮೀದ್ ಕರ್ಜೈ ಇಂಟರ್ ನ್ಯಾಷನಲ್ ಏರ್ ಪೋರ್ಟ್ ನಿಂದ ಭಾರತೀಯ ವಾಯುಪಡೆಯ C-17 ವಿಮಾನ 120 ಜನರನ್ನು ಕರೆತಂದಿದ್ದು, ಎಲ್ಲರೂ ಸುರಕ್ಷಿತವಾಗಿ ಗುಜರಾತ್ ನ ಜಾಮ್ ನಗರಕ್ಕೆ ಬಂದಿಳಿದಿದ್ದಾರೆ. ತಾಯ್ನಾಡಿಗೆ ಸುರಕ್ಷಿತವಾಗಿ ಮರಳಿದ ಭಾರತೀಯ ರಾಯಭಾರಿ ಸಿಬ್ಬಂದಿಗಳನ್ನು ಹೂಗುಚ್ಛ ನೀಡಿ, ಹಾರಹಾಕಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.

ತಾಲಿಬಾನಿಗಳ ಅಟ್ಟಹಾಸಕ್ಕೆ ಅಪ್ಘಾನಿಸ್ತಾನದಲ್ಲಿ ಕ್ಷಣ ಕ್ಷಣಕ್ಕೂ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಇನ್ನೊಂದೆಡೆ ಯುಎಸ್ ನ ಮಿಲಿಟರಿ ಸರಕು ವಿಮಾನ 640 ಅಪ್ಘಾನಿಸ್ತಾನಿಗಳನ್ನು ಒಮ್ಮೆಲೆ ಏರ್ ಲಿಫ್ಟ್ ಮಾಡುವ ಮೂಲಕ ರಕ್ಷಿಸಿಸಿದ್ದು, ಕತಾರ್ ನ ಸುರಕ್ಷಿತ ಸ್ಥಳಕ್ಕೆ ಸ್ಥಾಳಂತರ ಮಾಡಿದೆ.
ಅಪ್ಘಾನ್ ನಲ್ಲಿ ತಾಲಿಬಾನ್ ಅಟ್ಟಹಾಸ; ಬರೋಬ್ಬರಿ 640 ಜನರು ಒಮ್ಮೆಲೆ ಏರ್ ಲಿಫ್ಟ್

Home add -Advt

Related Articles

Back to top button