Latest

ಕೈ ತೊಳೆಯಲು ಹೋದ ಯುವಕನನ್ನು ಎಳೆದೊಯ್ದ ಮೊಸಳೆ

ದಾಂಡೇಲಿಯಲ್ಲಿ ದಾರುಣ ಘಟನೆ

ಪ್ರಗತಿವಾಹಿನಿ ಸುದ್ದಿ ದಾಂಡೇಲಿ :  ಇಲ್ಲಿನ ಕಾಳಿ ನದಿಯಲ್ಲಿ ಕೈ ಕಾಲು ತೊಳೆಯಲು ಹೋದ ಯುವಕನೊಬ್ಬನನ್ನು ಮೊಸಳೆ ಎಳೆದೊಯ್ದ ದಾರುಣ ಘಟನೆ ಸೋಮವಾರ ಸಂಜೆ ನಡೆದಿದೆ.
  ದಾಂಡೇಲಿಯ ಪಟೇಲ್ ನಗರದ ಅರ್ಷದ್ ಖಾನ್ ಎಂಬ ಯುವಕ ಮೊಸಳೆ ದಾಳಿಗೆ ಸಿಲುಕಿದವರು. ಇವರು ದಿನವೂ ಸಂಜೆ ಕೆಲಸ ಮುಗಿಸಿದ ಬಳಿಕ ಕಾಳಿ ನದಿಯಲ್ಲಿ ಕೈ ಕಾಲು ತೊಳೆದುಕೊಳ್ಳುತ್ತಿದ್ದರು. ಅದರಂತೆ ಇಂದೂ ಸಹ ಕೈ ಕಾಲು ತೊಳೆಯಲು ಹೋದಾಗ ಅಲ್ಲಿಯೇ ಹೊಂಚು ಹಾಕಿದ್ದ ಮೊಸಳೆ ಏಕಾಏಕಿ ದಾಳಿ ನಡೆಸಿ ಅರ್ಷದ್ ಅವರನ್ನು ಎಳೆದೊಯ್ದಿದೆ. ಸುತ್ತ ಮುತ್ತಲ ಜನ ಗಮನಿಸಿ ಬೊಬ್ಬೆ ಹಾಕಿದ್ದಾರೆ. ಸಧ್ಯ ಅರಣ್ಯ ಇಲಾಖೆಯ ಸಿಬ್ಬಂದಿ ಮತ್ತು ಸ್ಥಳೀಯರು ಅರ್ಷದ್ ಗಾಗಿ ಹುಡುಕಾಟ ನಡೆಸಿದ್ದಾರೆ.

Related Articles

Back to top button