Belagavi NewsBelgaum NewsEducationKannada NewsKarnataka NewsNational

*ಭವಿಷ್ಯದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಟ್ಯಾಲೆಂಟ್‌ ಸರ್ಚ್‌ ಪರೀಕ್ಷೆ ಸ್ಫೂರ್ತಿ: ಸಿಇಒ ರಾಹುಲ್‌ ಶಿಂಧೆ* 

ಪ್ರಗತಿವಾಹಿನಿ ಸುದ್ದಿ ಬೆಳಗಾವಿ: ಸರಕಾರಿ ಪ್ರೌಢ ಶಾಲೆಯಲ್ಲಿ ಓದುತ್ತಿರುವ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳ “ಪ್ರತಿಭಾನ್ವೇಷಣೆ ಪರೀಕ್ಷೆ” ನಿಮಿತ್ತ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್‌  ಶಿಂಧೆ ರವರು ಸರಕಾರಿ ಸರದಾರ್ಸ ಪ್ರೌಢಶಾಲೆಗೆ ಭೇಟಿ ನೀಡಿ, ಒಟ್ಟಾರೆ ಪರೀಕ್ಷಾ ವ್ಯವಸ್ಥೆಯ ಕುರಿತು ಸಂತಸ  ವ್ಯಕ್ತ ಪಡಿಸಿದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ ಪರೀಕ್ಷೆಯ ಅವಶ್ಯಕತೆ ಉಪಯುಕ್ತತತೆ ಮತ್ತು ಪ್ರಶ್ನೆಗಳ ಗುಣಮಟ್ಟ, ಪರೀಕ್ಷಾ ವ್ಯವಸ್ಥೆಯ ಬದಲಾವಣೆಯ ಅವಶ್ಯಕತೆ ಇತ್ಯಾದಿ ಕುರಿತು ವಿಚಾರ ಹಂಚಿಕೊಂಡರು ಹಾಗೂ ಸದರಿ ಸ್ಫರ್ಧಾತ್ಮಕ ಪರೀಕ್ಷೆಗಳು ಮಕ್ಕಳ ಭವಿಷ್ಯಕ್ಕೆ ಹೆಚ್ಚು ಉಪಯುಕ್ತವಾಗಿದ್ದು ಇಂತಹ ಪರೀಕ್ಷೆಗಳಿಂದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ  ಪರೀಕ್ಷೆ ಎದುರಿಸಲು ಸೂಕ್ತ ಸಿದ್ಧತೆ ಮತ್ತು ಆತ್ಮಸ್ಥೈರ್ಯ ಮೂಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಹೇಳಿದರು.

Home add -Advt

ಇದೇ ಸಂದರ್ಭದಲ್ಲಿ ಡಯಟ್ ಪ್ರಾಚಾರ್ಯರಾದ‌ ಬಸವರಾಜ ನಲವತವಾಡ, ಬಿ.ಇ.ಓ. ರವಿ ಭಜಂತ್ರಿ  ಹಾಗೂ ಉಪ ಪ್ರಾಂಶುಪಾಲರಾದ ಶಿವಶಂಕರ ಹಾದಿಮನಿ ಸೇರಿ ಇತರೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Back to top button