Kannada NewsKarnataka NewsLatest

ಅಪಘಾತ: ತಂದೆ ಸಾವು, ಮಗನ ಸ್ಥಿತಿ ಗಂಭೀರ

 ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಹುಕ್ಕೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟಬಾಗಿ ಕ್ರಾಸ್ ಹತ್ತಿರ ಇಂದು ಮಧ್ಯಾಹ್ನ 4.30ಕ್ಕೆ ಅಪಘಾತ ಸಂಭವಿಸಿದೆ.
 ದ್ವಿಚಕ್ರವಾಹನ ಮತ್ತು ಲಾರಿ ಮಧ್ಯೆ ಅಪಘಾತವಾಗಿದ್ದು  ತಂದೆ ಸಾವನ್ನಪ್ಪಿದ್ದು, ಮಗನ ಸ್ಥಿತಿ ಗಂಭೀರವಾಗಿದೆ .
  ಟಿಪ್ಪರ್ ಮತ್ತು ದ್ವಿಚಕ್ರ ವಾಹನ ಮುಖಾಮುಖಿ  ಡಿಕ್ಕಿ ಹೊಡೆದು ಓರ್ವ ವ್ಯಕ್ತಿ ಆಸ್ಪತ್ರೆಗೆ ಸಾಗಿಸುವಾಗ ಮಾಗ೯ ಮಧ್ಯೆ  ಮೃತಪಟ್ಟಿದ್ದು ಇನ್ನೋರ್ವ ವ್ಯಕ್ತಿಯನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು  ಆತನ ಸ್ಥಿತಿ  ಗಂಭೀರವಾಗಿದೆ.
ಮೃತನ ಹೆಸರು ಬಾಳಗೌಡ ಮಾರುತಿ ಪಾಟೀಲ್ (50), ಗಾಯಗೊಂಡವನ ಹೆಸರು ಬಸನಗೌಡ ಬಾಳಗೌಡ ಪಾಟೀಲ (25)  ಇವರು ತಂದೆ, ಮಗ ಆಗಿದ್ದು, ಸುಲ್ತಾನ್ ಪುರದವರು.
 ಸ್ಥಳಕ್ಕೆ ಹುಕ್ಕೇರಿ ಪೊಲೀಸ್ ಠಾಣಾ ಪೊಲೀಸರು ಭೇಟಿ ನೀಡಿದ್ದಾರೆ.

Related Articles

Back to top button