Latest

ಮತ್ತೊಂದು ಭೀಕರ ಅಪಘಾತ: ಬೆಳಗಾವಿ ASI ಪುತ್ರ ಸಾವು

ಪ್ರಗತಿವಾಹಿನಿ ಸುದ್ದಿ; ದಾವಣಗೆರೆ: ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬಳಿ ಮತ್ತೊಂದು ಭೀಕರ ಅಪಘಾತ ಸಂಭವಿಸಿದ್ದು, ಬೆಳಗಾವಿ ಜಿಲ್ಲೆಯ ಎ ಎಸ್ ಐ ಪುತ್ರರೊಬ್ಬರು ಮೃತಪಟ್ಟ ಘಟನೆ ನಡೆದಿದೆ.

ಹೊನ್ನಾಳಿ ರಸ್ತೆಯ ಮಾಸಡಿ ಗ್ರಾಮದ ಬಳಿ ಸೇತುವೆಗೆ ಕಾರು ಡಿಕ್ಕಿ ಹೊಡೆದು ನಿಯಂತ್ರಣತಪ್ಪಿ ಹಳ್ಳಕ್ಕೆ ಬಿದ್ದಿದ್ದು,  ಪರಿಣಾಮ ಎಎಸ್ ಐ ಪುತ್ರ ಸಾವನ್ನಪ್ಪಿದ್ದಾರೆ. ಪ್ರಕಾಶ್ ಅರಳೀಕಟ್ಟಿ ಮೃತ ದುರ್ದೈವಿ.

ಮೃತ ಪ್ರಕಾಶ್, ಬೆಳಗಾವಿ ನಗರದ ಮಾಳಮಾರುತಿ ಪೊಲೀಸ್ ಠಾಣೆಯ ಎ ಎಸ್ ಐ ಅವರ ಮಗ ಎಂದು ತಿಳಿದುಬಂದಿದೆ.\

ಈಚೆಗೆ ಶಾಸಕ ರೇಣುಕಾಚಾರ್ಯ ಅವರ ಅಣ್ಣನ ಮಗ ಚಂದ್ರಶೇಖರ ಸಾವಿಗೀಡಾಗಿರುವ ರೀತಿಯಲ್ಲೇ ಪ್ರಕಾಶ ಕೂಡ ಸಾವಿಗೀಡಾಗಿದ್ದಾರೆ. ಅದೇ ತಾಲೂಕು, ಅದೇ ಸಮಯದಲ್ಲಿ ಅದೇ ಮಾದರಿಯಲ್ಲಿ ಈ ಅವಘಡವೂ ಸಂಭವಿಸಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಪ್ರಕಾಶ ಶವ ಕೂಡ ಕಾರಿನ ಹಿಂಬದಿ ಸೀಟಿನಲ್ಲಿ ಪತ್ತೆಯಾಗಿದೆ.

ಭೀಕರ ಅಪಘಾತ; ಪ್ರಾಧ್ಯಾಪಕ ಸ್ಥಳದಲ್ಲೇ ದುರ್ಮರಣ

https://pragati.taskdun.com/accidenthampi-kannada-univercitylecture-death3-injuerd/

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button