Latest

ಅಂಗನವಾಡಿ ಸಹಾಯಕಿ ಅನುಮಾಸ್ಪದ ಸಾವು

ಪ್ರಗತಿವಾಹಿನಿ ಸುದ್ದಿ; ಮೈಸೂರು: ಕೆಲಸಕ್ಕೆ ತೆರಳಿದ ಅಂಗನವಾಡಿಯ ಅಡುಗೆ ಸಹಾಯಕಿ ಅನುಮಾನಾಸ್ಪದವಾಗಿ ಸವನಪ್ಪಿರುವ ಘಟನೆ ಮೈಸೂರು ಜಿಲ್ಲೆ ಬನ್ನಿಕುಪ್ಪೆ ಗೇಟ್ ಬಳಿ ನಡೆದಿದೆ.

ಹುಣುಸೂರು ತಾಲೂಕಿನ ಕಟ್ಟೆಮಳವಡಿ ಗ್ರಾಮದ ಮಲ್ಲಿಗೆ ಮೃತ ಮಹಿಳೆ. ಬನ್ನಿಕುಪ್ಪೆ ಗೆಟ್ ಬಳಿ ಮಹಿಳೆಯ ಶವ ಪತ್ತೆಯಾಗಿದೆ.

Home add -Advt

ಮಲ್ಲಿಗೆ ಕಳೆದ 10 ವರ್ಷಗಳಿಂದ ಅಂಗನವಾಡಿಯಲ್ಲಿ ಅಡುಗೆ ಸಹಾಯಕಿಯಾಗಿ ಕಾರ್ಯ ನಿರ್ವಹಿಸುತ್ತಿದಳು. ಸೋಮವಾರ ಎಂದಿನಂತೆ 11 ಗಂಟೆಯಲ್ಲಿ ಕೆಲಸಕ್ಕೆ ತೆರಳಿದ್ದರು.
ಆದರೆ ಹೆಣವಾಗಿ ಪತ್ತೆಯಾಗಿದ್ದಾಳೆ. ರೇಪ್ ಹಾಗೂ ಮರ್ಡರ್ ಆಗಿರಬಹುದು ಎಂದು ಕುಟುಂಬದವರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ಸ್ಥಳಕ್ಕೆ ಪೊಲೀಸ್ ಇಲಾಖೆ ಭೇಟಿ ನೀಡಿ ಶವ ವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.

ಶಾಸಕ ಮಂಜುನಾಥ್ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ.

ಹಂದಿಗುಂದ ಗ್ರಾಮ ಪಂ ಉಪಚುನಾವಣೆ; ಎಂಟು ಜನ ಅಭ್ಯರ್ಥಿಗಳು ಚುನಾವಣೆ ಕಣದಲ್ಲಿ

https://pragati.taskdun.com/latest/handigunda-gram-panchayath-electionbjpcongress/

Related Articles

Back to top button