Belagavi NewsBelgaum NewsKannada NewsKarnataka NewsLatest

*ಬೆಳಗಾವಿಯಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣೆಯ ಸಿಬ್ಬಂದಿ ಅಂತರ್ ರಾಜ್ಯ ಕಳ್ಳ ನಾಗರಾಜ್ ಸುಭಾಷ್ ಈತನನ್ನು ವಶಕ್ಕೆ ಪಡೆದುಕೊಂಡು 20 ಲಕ್ಷ ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ‌

ಬೆಳಗಾವಿ ನಗರದಲ್ಲಿ ಇತ್ತೀಚಿಗೆ ಘಟಿಸುತ್ತಿದ್ದ ಕಳ್ಳತನ ಪ್ರಕರಣಗಳನ್ನು  ಗಂಭೀರವಾಗಿ ಪರಿಗಣಿಸಿ ಕಳ್ಳತನ ಪ್ರಕರಣಗಳನ್ನು ಪತ್ತೆ ಮಾಡಲು ನಗರದ ಎಲ್ಲ ಪಿಎಸ್ಐ ಪಿಎ ರವರಿಗೆ ಸೂಚಿಸಿದಂತೆ ಈ ಕಳ್ಳನನ್ನು ವಿಚಾರಣೆಗೊಳಪಡಿಸಿದಾಗ ಇವನು ತನ್ನ ಗೆಳೆಯರೊಂದಿಗೆ XUV 500  ಐಷಾರಾಮಿ ಕಾರಿನ ಮೇಲೆ PRESS ಎಂದು ಬರೆಯಿಸಿದ್ದಾ. 

ಆ ಕಾರಿನ ಮೂಲಕ ಬಂದು ಮಹಾಂತೇಶ್ ನಗರ, ಆಂಜನೇಯ ನಗರ ಮತ್ತು ಶಿವಬಸವ ನಗರಗಳಲ್ಲಿ ಕಳ್ಳತನ ಆಗಿರುವ ಬಗ್ಗೆ ವಿಚಾರಣೆಗೆ ಒಳಪಡಿಸಿದಾಗ ಒಪ್ಪಿಕೊಂಡಿದ್ದಾನೆ. ಈ ಕಳ್ಳನಿಂದ 10 ಲಕ್ಷ ಮೌಲ್ಯದ ಬಂಗಾರ ಹಾಗೂ ಸುಮಾರು 10 ಲಕ್ಷದ xuv ಕಾರು ಹೀಗೆ ಒಟ್ಟು 20 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ

ಈತನೊಂದಿಗೆ ಕೃತ್ಯದಲ್ಲಿದ್ದ ಇನ್ನುಳಿದ ಆರೋಪಿತರಾದ ಹುಸೇನ್ @ ಸಾಗರ್ ಗಾಯಕ್ವಾಡ್, ಅಮುಲ್ ಕೇತ್ಯಾ ಎಂಬುವವರು ಪರಾರಿಯಾಗಿದ್ದಾರೆ, ವಿಶೇಷ ತಂಡವನ್ನು ರಚಿಸಿ ಅವರ ಪತ್ತೆ ಕಾರ್ಯ ಮುಂದುವರಿಸಿದೆ. 

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಅಂತರ್ ರಾಜ್ಯ ಕಳ್ಳರ ಬಂಧನದಲ್ಲಿ ಶ್ರಮಿಸಿದ ಮಾರ್ಕೆಟ ವಿಭಾಗದ ಎಸಿಪಿ ಸೋಮೇಗೌಡ ಯು. ಜಿ. ರವರ ಮಾರ್ಗದರ್ಶನದಲ್ಲಿ ಪಿ ಐ ಜಯಂ ಕಾಲಿ ಮಿರ್ಚಿ ಪಿ ಐ ಇವರ ನೇತೃತ್ವದ ತಂಡ ಹೊನ್ನಪ್ಪ ತಳವಾರ್ ಪಿಎಸ್ಐ ಶ್ರೀಶೈಲ್ ಹುಳಗೇರಿ ಪಿಎಸ್ಐ ಮತ್ತು ಸಿಬ್ಬಂದಿ ಎಂ ಜಿ ಕುರೇರ್, ಚಿನ್ನಪ್ಪಗೋಳ,  ಬಸು ಬಸ್ತ, ಚಂದ್ರು ಚಿಗರಿ ಕೆ.ಬಿ. ಗೌರಾನಿ, ಹೊಸಮನಿ, ರವಿ ಬಾರಿಕರ್, ಮುಜಾವರ, ಶಿವಾಜಿ ಚೌಹಾನ, ಮಾರುತಿ ಮಾದರ, ಮಲ್ಲಿಕಾರ್ಜುನ್ ಗಾಡವಿ, ಜಗನ್ನಾಥ ಭೋಸ್ಲೆ, ಬಸವರಾಜ ಕಲ್ಲಪ್ಪನವರ, ಹಾಗೂ ತಾಂತ್ರಿಕ ವಿಭಾಗದ ಸಿಬ್ಬಂದಿ  ರಮೇಶ್ ಅಕ್ಕಿ ಹಾಗೂ ಮಹಾದೇವ ಕಾಶಿದ ರವರ ತಂಡವನ್ನು ಬೆಳಗಾವಿ ಪೊಲೀಸ್ ಆಯುಕ್ತ ಯೆಡಾ ಮಾಟಿನ್ ಮಾರ್ಬನ್ಯಾಂಗ್ ಅವರು ಪ್ರಶಂಸಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button