Belagavi NewsBelgaum NewsKannada NewsKarnataka NewsLatest

ರೈತನ ಮೇಲೆ ಕರಡಿ ದಾಳಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ : ಖಾನಾಪುರ ತಾಲ್ಲೂಕಿನ ಕಣಕುಂಬಿ ಅರಣ್ಯ ವ್ಯಾಪ್ತಿಯ ಹುಳಂದ ಗ್ರಾಮದ ಹೊರವಲಯದಲ್ಲಿ ದನ ಮೇಯಿಸಲು ತೆರಳಿದ್ದ ರೈತರೊಬ್ಬರ ಮೇಲೆ‌ ಒಂದು ಹೆಣ್ಣು ಕರಡಿ ಮತ್ತು ಎರಡು ಕರಡಿ ಮರಿಗಳಿದ್ದ ತಂಡ ದಾಳಿ ನಡೆಸಿದೆ.

ಹುಳಂದ ಗ್ರಾಮದ ರೈತ ವಿಠ್ಠಲ ಗಾವಡೆ (೫೪) ಅವರ ಕೈ, ಮುಖ, ಬೆನ್ನು, ಕಾಲುಗಳನ್ನು ಕರಡಿಗಳು ಪರಚಿವೆ. ಜೊತೆಗೆ ಗಂಭೀರ ಗಾಯಗಳನ್ನು ಮಾಡಿದ್ದು, ಆಕಸ್ಮಿಕವಾಗಿ ನಡೆದ ಘಟನೆಯಿಂದಾಗಿ ಅವರು ವಿಪರೀತ ರಕ್ತಸ್ರಾವದಿಂದ ಬಳಲಿದ್ದಾರೆ. ಅವರನ್ನು ಬೆಳಗಾವಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

Related Articles

Back to top button