Kannada NewsKarnataka NewsLatest

ಹಾವು ಕಡಿತಕ್ಕೆ ಬಲಿಯಾದ ರೈತನ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹಾವು ಕಡಿತದಿಂದ ಮೃತಪಟ್ಟಿದ್ದ ರೈತನ ಕುಟುಂಬಕ್ಕೆ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಪರಿಹಾರದ ಚೆಕ್ ವಿತರಿಸಿದರು.

ಸುಳಗಾ (ಯು) ಗ್ರಾಮದ ಯಲ್ಲಪ್ಪ ನರೋಟಿ ಎಂಬ ರೈತ ತನ್ನ ಹೊಲದ ಕೆಲಸದಲ್ಲಿ ನಿರತನಾದ ಸಮಯದಲ್ಲಿ ಹಾವು ಕಡಿತದಿಂದ ಮೃತಪಟ್ಟಿದ್ದರು.

Home add -Advt

ಈ ಹಿನ್ನೆಲೆಯಲ್ಲಿ ಇವತ್ತು ಮೃತ ರೈತನ ಪತ್ನಿಗೆ ಸರಕಾರದಿಂದ ಎರಡು ಲಕ್ಷ ರೂ. ಗಳನ್ನು ಬಿಡುಗೊಡೆಗೊಳಿಸಿ, ಅವರಿಗೆ ಲಕ್ಷ್ಮೀ ಹೆಬ್ಬಾಳಕರ ಚೆಕ್ ಹಸ್ತಾಂತರಿಸಿದರು.

ಈ ವೇಳೆ ನರೋಟಿ ಕುಟುಂಬದವರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ಮುರುಘಾಮಠದಲ್ಲಿ ಕಳ್ಳತನ

Related Articles

Back to top button