Kannada NewsKarnataka NewsLatest

ಬೆಳಗಾವಿ: ರೌಡಿ ಶೀಟರ್ ಮನೆ ಮೇಲೆ ಪೊಲೀಸ್ ದಾಳಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಬೆಳಗಾವಿ ಲೋಕಸಭಾ ಉಪಚುನಾವಣೆ ಘೋಷಣೆ ಬೆನ್ನಲ್ಲೇ ರೌಡಿ ಶೀಟರ್ ಒಬ್ಬನ ಮನೆ ಮೇಲೆ ಪೊಲೀಸರು ದಾಳಿ ನಡೆಸಿ, ಅಕ್ರಮ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಕಪಿಲೇಶ್ವರ ಮಂದಿರ ಹಿಂಭಾಗದಲ್ಲಿರುವ ರೌಡಿಶೀಟರ್ ಕಿತ್ತೂರ ರಜಪೂತ್ ಮನೆ ಮೇಲೆ ಕ್ರೈಂ ಬ್ರಾಂಚ್ ಎಸಿಪಿ ನಾರಾಯಣ ಭರಮನಿ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಳಗ್ಗೆ 6 ಗಂಟೆಗೇ ದಾಳಿ ಆರಂಭವಾಗಿದ್ದು, ವಿಚಾರಣೆ ಮುಂದುವರಿದಿದೆ.

Home add -Advt

ಮನೆಯಿಂದ ಅಪಾರ ಪ್ರಮಾಣದ ಅಕ್ರಮ ಶಸ್ತ್ರಾಸ್ತ್ರ ಮತ್ತು ಒಂದು ಪಿಸ್ತೂಲ್ ವಶಕ್ಕೆ ಪಡೆದಿದ್ದಾರೆ.

ಕಿತ್ತೂರ ರಜಪೂತ್ ಹಲವು ಡಕಾಯಿತಿ ಪ್ರಕರಣಗಳಲ್ಲಿ ಭಾಗಿಯಾಗಿರುವ ಆರೋಪ ಹೊತ್ತಿದ್ದಾನೆ.

Related Articles

Back to top button