Kannada NewsKarnataka NewsLatest

*ಬೆಳ್ಳಂ ಬೆಳಿಗ್ಗೆ ಭೀಕರ ಬೆಂಕಿ ಅವಘಡ: 19 ಇವಿ ಬೈಕ್ ಗಳು ಸುಟ್ಟು ಭಸ್ಮ*

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಬೆಳಂಬೆಳಿಗ್ಗೆ ಭೀಕಪ ಬೆಂಕಿ ಅವಘಡ ಸಂಭವಿಸಿದೆ. 19 ಇವಿ ವಾಹನಗಳು ಸಂಪೂರ್ಣ ಸುಟ್ತು ಕರಕಲಾಗಿವೆ.

ಬೆಂಗಳೂರಿನ ಯಲಚೇಹಳ್ಳಿಯ ಕಮಿರ್ಷಿಯ ಕಟ್ಟಡದಲ್ಲಿ ಈ ಅವಘಡ ಸಂಭವಿಸಿದೆ. ಮೆಟ್ರ‍ೋ ನಿಲ್ದಾಣದ ಬಳಿಯೇ ಈ ಘಟನೆ ನಡೆದಿದೆ. ಇವಿ ದ್ವಿಚಕ್ರವಾಹನ ಪ್ಲಗ್ ಪಾಯಿಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕೆಲವೇ ಸಮಯದಲ್ಲಿ ಬೆಂಕಿಯ ಕೆನ್ನಾಲಿಗೆಗೆ ಎಲೆಕ್ಟ್ರಿಕ್ ಬೈಕ್ ಗಳು ಹೊತ್ತಿ ಉರಿದಿವೆ.

Home add -Advt

ಬೆಂಕಿ ಅವಘಡಕ್ಕೆ 6 ಸಿಲಿಂಡರ್ ಗಳು ಕೂಡ ಸ್ಫೋಟಗೊಂಡಿದ್ದು, ಸುತ್ತಮುತ್ತಲ ಕಟ್ಟಡಗಳಿಗೂ ಬೆಂಕಿ ವ್ಯಾಪಿಸಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. 19 ಬೈಕ್ ಗಳು ಸುಟ್ಟು ಕರಕಲಾಗಿದ್ದು, ಅಪಾರ ಪ್ರಮಾಣ ಹಾನಿಯಾಗಿದೆ.

Related Articles

Back to top button