Belagavi NewsBelgaum NewsPolitics

*ಉತ್ತರ ಕರ್ನಾಟಕದ‌ ಬಗ್ಗೆ ವಿಶೇಷ ಒತ್ತು ಕೊಡಲಾಗುವುದು: ಸಚಿವ ಎಚ್.ಕೆ ಪಾಟೀಲ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಇಂದಿನಿಂದ ಉತ್ತರ ಕರ್ನಾಟಕ ಭಾಗದ ಅಭಿವೃದ್ದಿ ಬಗ್ಗೆ ಚರ್ಚೆ ಮಾಡಲಾಗುತ್ತದೆ. ಉತ್ತರ ಕರ್ನಾಟಕದ‌ ಬಗ್ಗೆ ವಿಶೇಷ ಒತ್ತು ಕೊಡಲಾಗುವುದು. ಸಿಎಂ ಜೊತೆ ಈ ಬಗ್ಗೆ ಚರ್ಚೆ ಮಾಡಲಿದ್ದೇವೆ. ಅತ್ಯಂತ ಪರಿಣಾಮಕಾರಿಯಾಗಿ ಉತ್ತರ ಕರ್ನಾಟಕ‌ ಭಾಗದ ಬಗ್ಗೆ ಚರ್ಚೆ ಆಗಲಿದೆ ಎಂದು ಸಚಿವ ಎಚ್ .ಕೆ.ಪಾಟೀಲ್ ಹೇಳಿದರು.

ಬೆಳಗಾವಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉತ್ತರ ಕರ್ನಾಟಕ ಅಭಿವೃದ್ದಿ ವಿಚಾರದಲ್ಲಿ ಈ‌ ಹಿಂದಿನಿಂದಲೂ‌ ಅನ್ಯಾಯ ಆಗುತ್ತಲೆ ಇದೆ. ನಂಜುಂಡಪ್ಪ ವರದಿ‌ ಪ್ರಕಾರ ಈವರೆಗೂ ಕಾರ್ಯಕ್ರಮ ಮುಂದುವರೆಸಿಕೊಂಡು ಬರಲಾಗುತ್ತಿದೆ. ಆ ಎಲ್ಲ ಕಾರ್ಯಕ್ರಮಗಳನ್ನು ಸರ್ಕಾರ ಮುಂದುವರೆಸಿಕೊಂಡು ಹೋಗುತ್ತಿದೆ. ಈಗಾಗಲೆ ಸಾಹಿತ್ಯ ಸಮ್ಮೇಳನ‌ ಹಿನ್ನೆಲೆ‌‌ ಮೊದಲೆ ಅಧಿವೇಶನ‌ ನಿಗಧಿಪಡಿಸಲಾಗಿತ್ತು. ಹಾಗಾಗಿ 19 ರಂದು ಅಧಿವೇಶನ ಮುಕ್ತಾಯಗೊಳಿಸಲಾಗುತ್ತಿದೆ. ಈ ಹಿನ್ನೆಲೆ ನಾವು ಯಾವುದೆ ಪಲಾಯನ‌ಮಾಡುವ ಪ್ರಶ್ನೆಯೆ ಇಲ್ಲ. ಸರ್ಕಾರದ ಹಗರಣಗಳ ಬಗ್ಗೆ ವಿಪಕ್ಷಗಳು ಯಾವುದೆ ಆರೋಪವನ್ನೂ ಮಾಡಿಲ್ಲ. ಅಧಿವೇಶನದಲ್ಲಿ ಈ ಬಗ್ಗೆ ವಿಪಕ್ಷಗಳು ಚರ್ಚೆಯೂ ಮಾಡಿಲ್ಲ. ಅದು ಹೇಗೆ ನಾವು ಪಲಾಯನವಾದ ಮಾಡುತ್ತೇವೆ ಅಂತಾ ಆರೋಪ ಮಾಡುತ್ತಾರೆ ಎಂದು ವಿಪಕ್ಷ ನಾಯಕ‌ ಆರ್ ಅಶೋಕ್ ಆರೋಪಕ್ಕೆ ಸಚಿವ ಎಚ್.ಕೆ.ಪಾಟೀಲ್ ತಿರುಗೇಟು ನೀಡಿದರು.

Home add -Advt

Related Articles

Back to top button