Politics

*ಬಿಜೆಪಿ ಮುಖಂಡ ನೇತ್ರಾವತಿ ನದಿಯಲ್ಲಿ ಶವಾಗಿ ಪತ್ತೆ!*

ಪ್ರಗತಿವಾಹಿನಿ ಸುದ್ದಿ: ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ ನಗರಸಭೆ ಬಿಜೆಪಿ ಸದಸ್ಯ ನೇತ್ರಾವತಿ ನದಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ರಮೇಶ್ ರೈ ಶವವಾಗಿ ಪತ್ತೆಯಾಗಿರುವ ಬಿಜೆಪಿ ಮುಖಂಡ. ಬಂಟ್ವಾಳ ತಾಲೂಕಿನ ಪುತ್ತೂರು ನಗರಸಭೆ ಬಿಜೆಪಿ ಸದ್ಯರಾಗಿದ್ದ ರಮೇಶ್ ರೈ ಇಂದು ಬೆಳಿಗ್ಗೆಯಿಂದ ನಾಪತ್ತೆಯಾಗಿದ್ದರು. ಅವರ ಬೈಕ್ ಹಾಗೂ ಮೊಬೈಲ್ ಪಾಣಿಮಂಗಳೂರು ಬಳಿಯ ನೇತ್ರಾವತಿ ನದಿಯ ಸೇತುವೆ ಬಳಿ ಪತ್ತೆಯಾಗಿತ್ತು. ಇದೀಗ ನದಿಯಲ್ಲಿ ರಮೇಶ್ ರೈ ಅವರ ಮೃತದೇಹ ಪತ್ತೆಯಾಗಿದೆ.

Home add -Advt

ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಬಂಟ್ವಾಳ ಠಾಣೆ ಪೊಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


Related Articles

Back to top button