Kannada NewsLatestNational
ಚಿರತೆ ದಾಳಿ ಭೀತಿ; ತಿರುಮಲ ಬೆಟ್ಟ ಏರುವ ಯಾತ್ರಿಗಳ ರಕ್ಷಣೆಗೆ ವ್ಯವಸ್ಥೆ

ಪ್ರಗತಿವಾಹಿನಿ ಸುದ್ದಿ, ತಿರುಮಲ: ಇಲ್ಲಿನ ಶ್ರೀ ವೆಂಕಟೇಶ್ವರ ದೇವಸ್ಥಾನಕ್ಕೆ ಕಾಲ್ನಡಿಗೆಯಲ್ಲೇ ಬೆಟ್ಟ ಹತ್ತಿ ತೆರಳುವ ಪಾದಯಾತ್ರಿಗಳ ರಕ್ಷಣೆಗೆ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದೆ.
ಹೆತ್ತವರೊಂದಿಗೆ ಮೆಟ್ಟಿಲು ಏರುತ್ತ ದೇಗುಲಕ್ಕೆ ಸಾಗುವಾಗ ಬಾಲಕಿಯೊಬ್ಬಳನ್ನು ಚಿರತೆಯೊಂದು ಹೊತ್ತೊಯ್ದು ಕೊಂದು ಹಾಕಿದ ಘಟನೆ ಬಳಿಕ ಟಿಟಿಡಿ ಈ ನಿರ್ಧಾರ ಪ್ರಕಟಿಸಿದೆ.


