Latest

ವಿಚಾರಣೆಗೆ ಹಾಜರಾಗ್ತಾರಾ ರಮೇಶ್ ಜಾರಕಿಹೊಳಿ?

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಇಂದು ವಿಚಾರಣೆಗೆ ಹಾಜರಾಗುವಂತೆ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ನೋಟೀಸ್ ನೀಡಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಮೇಶ್ ಜಾರಕಿಹೊಳಿ ಒಮ್ಮೆ ಮಾತ್ರ ವಿಚಾರಣೆಗೆ ಹಾಜರಾಗಿದ್ದು, ಎರಡನೇ ಬಾರಿ ಅನಾರೋಗ್ಯದ ಕಾರಣಕ್ಕಾಗಿ ವಿಜಾರಣೆಗೆ ಗೈರಾಗಿದ್ದರು. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 10:30ಕ್ಕೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐಟಿ ನೋಟೀಸ್ ನೀಡಿದೆ. ಹಾಗಾಗಿ ಜಾರಕಿಹೊಳಿ ಇಂದು ವಿಚಾರಣೆಗೆ ಹಾಜರಾಗುತ್ತಾರಾ? ಅಥವಾ ಇಂದೂ ಕೂಡ ಅನಾರೋಗ್ಯದ ಕಾರಣ ವಿಚಾರಣೆಯಿಂದ ದೂರ ಉಳಿಯುತ್ತಾರಾ ಎಂಬುದು ಕುತೂಹಲ ಕೆರಳಿಸಿದೆ.

ಇನ್ನು ಸಂತ್ರಸ್ತ ಯುವತಿ ಕೂಡ ಇಂದು ವಿಚಾರಣೆಗೆ ಹಾಜರಾಗಲಿದ್ದು, ಎಸ್ ಐಟಿಯಿಂದ ಇಂದೂ ಆಕೆಯ ವಿಚಾರಣೆ ಮುಂದುವರೆಯಲಿದೆ.

ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು?
ಯಡಿಯೂರಪ್ಪನವರ ಆ ಮಾತಿನಿಂದ ಆಕೆಗೆ ಶಾಕ್ ಆಗಿದೆಯಂತೆ

Home add -Advt

Related Articles

Back to top button