Latest

*ಮಗನ ಕೊಲೆಯಿಂದ ಮನನೊಂದ ತಾಯಿ ಆತ್ಮಹತ್ಯೆ*

ಪ್ರಗತಿವಾಹಿನಿ ಸುದ್ದಿ: ಮಗನ ಹತ್ಯೆಯಿಂದ ಮನನೊಂದಿದ್ದ ತಾಯಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮೈಸೂರಿನ ಕೂರ್ಗಳ್ಳಿಯಲ್ಲಿ ನಡೆದಿದೆ.

Home add -Advt

ಭಾಗ್ಯಮ್ಮ (46) ಆತ್ಮಹತ್ಯೆ ಮಾಡಿಕೊಂದವರು. ಕೆಲ ದಿನಗಳ ಹಿಂದೆ ಅಳಿಯನಿಂದಲೇ ಮಗ ಕೊಲೆಯಾಗಿದ್ದ. ಇದರಿಂದ ತೀವ್ರವಾಗಿ ನೊಂದಿದ್ದ ಭಾಗ್ಯಮ್ಮ, ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಭಾಗ್ಯಮ್ಮ ತನ್ನ ಮಗಳನ್ನು ರವಿಚಂದ್ರನ್ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದರು. ದಂಪತಿ ಮೈಸೂರಿನ ಕುವೆಂಪು ನಗರದಲ್ಲಿ ವಾಸವಾಗಿದ್ದರು. ಅಳಿಯ ರವಿಚಂದ್ರನ್ ವರದಕ್ಷಿಣೆಗಾಗಿ ಪತ್ನಿಗೆ ಪೀಡಿಸುತ್ತಿದ್ದ.

ಜೂನ್ 9ರಂದು ಪತ್ನಿಯ ಮೇಲೆ ರವಿಚಂದ್ರನ್ ಹಲ್ಲೆ ನಡೆಸಿದ್ದ. ಪತಿ-ಪತ್ನಿ ನಡುವಿನ ಜಗಳ ಬಿಡಿಸಲೆಂದು ಭಾವ ಅಭಿಷೇಕ್ ಹೋಗಿದ್ದ. ಈ ವೇಳೆ ರವಿಚಂದ್ರನ್ ಅಭಿಷೇಕ್ ಗೆ ಚಾಕುವಿನಿಂದ ಮನಬಂದಂತೆ ಇರಿದು ಕೊಲೆಗೈದಿದ್ದಾನೆ.

ಅಳಿಯನಿಂದಲೇ ಮಗ ಕೊಲೆಯಾದ ಘಟನೆಯಿಂದ ಭಾಗ್ಯಮ್ಮ ಆಘಾತಕ್ಕೊಳಗಾಗಿದ್ದರು. ಇದೇ ವಿಚಾರವಾಗಿ ಮನನೊಂದು ಇಂದು ಮನೆಯಲ್ಲಿಯೇ ನೇಣಿಗೆ ಕೊರಳೊಡ್ಡಿದ್ದಾರೆ.


ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Related Articles

Back to top button