Kannada NewsKarnataka NewsNationalPolitics

*ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ*

ಪ್ರಗತಿವಾಹಿನಿ ಸುದ್ದಿ: ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಎಸ್.ಎ.ಪಾಟೀಲ್ ವಿಧಿವಶರಾಗಿದ್ದಾರೆ. ಡಾ. ಎಸ್.ಎ.ಪಾಟೀಲ್ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಂಬನಿ ಮಿಡಿದಿದ್ದಾರೆ.

Home add -Advt

ನಾಡಿನ ಹೆಮ್ಮೆಯ ಕೃಷಿ ವಿಜ್ಞಾನಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಮಾಜಿ ಕುಲಪತಿಗಳಾದ ಡಾ. ಎಸ್.ಎ.ಪಾಟೀಲ್ ಅವರ ನಿಧನದ ಸುದ್ದಿ ತಿಳಿದು ಬೇಸರವಾಯಿತು ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ. 

ಕುಲಪತಿಗಳಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ದೇಶದಲ್ಲೇ ಅತ್ಯುನ್ನತ ಶಿಕ್ಷಣ ಕೇಂದ್ರವಾಗಿ ಕಟ್ಟಿಬೆಳೆಸಿದ ಪಾಟೀಲರು ಹೈಬ್ರಿಡ್ ಹತ್ತಿ ತಳಿ ಸಂಶೋಧನೆ, ಗುಣಮಟ್ಟದ ಬೀಜ ವಿತರಣೆಗಾಗಿ “ಬೀಜ ಗ್ರಾಮ ಯೋಜನೆ” ಆರಂಭಿಸಿ ದೇಶದ ರೈತರ ಪಾಲಿಗೆ ಅತ್ಯಂತ ಪ್ರೀತಿಪಾತ್ರ ವಿಜ್ಞಾನಿಯಾಗಿದ್ದರು. ಪಾಟೀಲರ ಅಗಲಿಕೆಯಿಂದ ನಾಡಿನ ಕೃಷಿ ಮತ್ತು ಸಂಶೋಧನಾ ವಲಯ ಬಡವಾಗಿದೆ. 

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅವರ ಕುಟುಂಬವರ್ಗಕ್ಕೆ ನೋವು ಭರಿಸುವ ಶಕ್ತಿಯನ್ನು ದೇವರು ಕರುಣಿಸಲಿ ಎಂದು ಪ್ರಾರ್ಥಿಸಿದ್ದಾರೆ. 

Related Articles

Back to top button