Karnataka NewsLatestPolitics

*ಕುಡಿಯುವ ನೀರಿನ ಯೋಜನೆ: ಕಾಮಗಾರಿ ವಿಳಂಬವಾದರೆ ಕ್ರಮ: ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ನಗರ ಪ್ರದೇಶಗಳ ಕುಡಿಯುವ ನೀರಿನ ಕಾಮಗಾರಿಗಳು ನಿಗದಿತ ಸಮಯಕ್ಕೆ ಪೂರ್ಣಗೊಳಿಸದಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಾಭಿವೃದ್ಧಿ ಸಚಿವರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಶುಕ್ರವಾರ ತಿಳಿಸಿದರು.

ಬೆಳಗಾವಿ, ಕಲಬುರಗಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಕೆಯುಐಡಿಎಫ್‌ಸಿ ಮೂಲಕ ವಿಶ್ವಬ್ಯಾಂಕ್ ಪ್ರಾಯೋಜಿತ ಕುಡಿಯುವ ನೀರಿನ ಬೃಹತ್ ಕಾಮಗಾರಿಗಳನ್ನು  ಎಲ್ ಅಂಡ್ ಟಿ ಅನುಷ್ಠಾನ ಗೊಳಿಸುತ್ತಿದ್ದು,  ಕಾಮಗಾರಿಗಳು ನಿಧಾನವಾಗಿರುವ ಹಿನ್ನೆಲೆಯಲ್ಲಿ ಎಲ್ ಅಂಡ್ ಟಿ ಅಧಿಕಾರಿಗಳಿಗೆ ನಿಗದಿತ ಕಾಲಮಿತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ತಾಕೀತು ಮಾಡಿದರು.

ಎಲ್ ಅಂಡ್ ಟಿ ಯೋಜನಾ ಮುಖ್ಯಸ್ಥರಾದ ವೆಂಕಟೇಶನ್ ಹಾಗೂ ಇತರೆ ಅಧಿಕಾರಿಗಳಿದ್ದರು.

Home add -Advt

Related Articles

Back to top button