Kannada NewsKarnataka News

*ಫ್ಯಾಕ್ಟರಿ ನೌಕರನ ಹತ್ಯೆಗೈದ ಸಹೋದ್ಯೋಗಿಗಳು*

ಪ್ರಗತಿವಾಹಿನಿ ಸುದ್ದಿ: ಕ್ಷುಲ್ಲಕ ಕಾರಣಕ್ಕೆ ಜ್ಯೂಸ್ ಫ್ಯಾಕ್ಟರಿಯ ಕಾರ್ಮಿಕರ ನಡುವೆ ಗಲಾಟೆಯಾಗಿದ್ದು, ಓರ್ವ ಕಾರ್ಮಿಕ ಸಾವನ್ನಪ್ಪಿರುವ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಯಚ್ಚನಹಳ್ಳಿ ಗ್ರಾಮದ ಬಳಿ ನಡೆದಿದೆ.

ಉತ್ತರ ಪ್ರದೇಶ ಮೂಲದ ಉಯ್ಯಾದ್ ತಲಾ (24) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಕಾರ್ಮಿಕರ ನಡುವೆ ಯಾವುದೋ ಕಾರಣಕ್ಕೆ ಚಿಕ್ಕ ಕಿರಿಕ್ ಆಗಿದೆ, ಬಳಿಕ ಮಾತಿಗೆ ಮಾತು ಬೆಳೆದು ಹೊಡೆದಾಟವಾಗಿದ್ದು, ಈ ಗಲಾಟೆಯಲ್ಲಿ ಉಯ್ಯಾದ್ ಗಂಭೀರ ಗಾಯಗೊಂಡಿದ್ದ.

Home add -Advt

ಗಾಯಾಳುವನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿಲಾಗಿಯಿತು, ಆದರೆ ದಾರಿ ಮಧ್ಯೆ ಕಾರ್ಮಿಕ ಮೃತಪಟ್ಟಿದ್ದಾನೆ. ಈ ಘಟನೆಯ ಸಂಬಂಧ ಶ್ರೀನಿವಾಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಾದ ರಾಕೇಶ್ (20) ಹಾಗೂ ರವಿಯನ್ನು (25) ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Related Articles

Back to top button