National

*ದೇಶದಲ್ಲಿ ಕೋವಿಡ್ ಸೋಂಕಿಗೆ ಇಬ್ಬರು ಸಾವು*

ಪ್ರಗತಿವಾಹಿನಿ ಸುದ್ದಿ: ಜಗತ್ತಿನಾದ್ಯಂತ ತಲ್ಲಣ ಸೃಷ್ಟಿಸಿದ ಕ್ರೂರಿ ಕರೋನಾ ಸೋಂಕು ದೇಶದಲ್ಲಿ ಮತ್ತೆ ಕಾಣಿಸಿಕೊಳ್ಳುತ್ತಿದೆ.‌ ಮಹಾರಷ್ಟ್ರದಲ್ಲಿ ಕಳೆದ ವಾರ ಕಿಂಗ್ ಎಡ್ವರ್ಡ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಇಬ್ಬರು ರೋಗಿಗಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

14 ವರ್ಷ ವಯಸ್ಸಿನ ಒಬ್ಬ ರೋಗಿ ನೆಪ್ರೋಟಿಕ್ ಸಿಂಡ್ರೋಮ್‌ನಿಂದ ಮೂತ್ರಪಿಂಡ ವೈಫಲ್ಯದಿಂದ ಬಳಲುತ್ತಿದ್ದ ಮತ್ತು 54 ವರ್ಷದ ಇನ್ನೊಬ್ಬ ರೋಗಿ ಕ್ಯಾನ್ಸರ್ ಚಿಕಿತ್ಸೆಗೆ ಒಳಗಾಗಿದ್ದು, ಕೋವಿಡ್ ಕೂಡಾ ಪಾಸಿಟಿವ್ ಬಂದಿತ್ತು.

ಪ್ರಸ್ತುತ ಭಾರತದಲ್ಲಿ 257 ಸಕ್ರಿಯ ಕೋವಿಡ್ ಪ್ರಕರಣಗಳಿವೆ. ಆರೋಗ್ಯ ಸಚಿವಾಲಯ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ. ಮೇ ತಿಂಗಳಲ್ಲಿ ಹಿಂದಿನ ತಿಂಗಳುಗಳಿಗಿಂತ ಹೆಚ್ಚಿನ ಕೋವಿಡ್ ರೋಗಿಗಳು ಕಂಡುಬಂದಿದ್ದರೂ, ಈ ಅನಾರೋಗ್ಯವು ಈಗ ಸ್ಥಳೀಯವಾಗಿದೆ ಮತ್ತು ಭಯಭೀತರಾಗುವ ಅವಶ್ಯಕತೆಯಿಲ್ಲ ಎಂದು ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಸ್ಪಷ್ಟಪಡಿಸಿದೆ. 

ಸೆವೆನ್ ಹಿಲ್ಸ್ ಆಸ್ಪತ್ರೆ ಮತ್ತು ಕಸ್ತೂರ್ಬಾ ಆಸ್ಪತ್ರೆಗಳು ಕೋವಿಡ್‌ಗಾಗಿ ಗೊತ್ತುಪಡಿಸಿದ ಹಾಸಿಗೆಗಳನ್ನು ಹೊಂದಿವೆ, ಇವುಗಳನ್ನು ಅಗತ್ಯಕ್ಕೆ ತಕ್ಕಂತೆ ಹೆಚ್ಚಿಸಬಹುದು ಎಂದು ಬಿಎಂಸಿ ಹೇಳಿದೆ.

Home add -Advt

ಇದೀಗ ವಿಶ್ವದಾದ್ಯಂತ ಮಹಾಮಾರಿ ಕೊರೊನಾ ವೈರಸ್‌ನ ಭೀತಿ ಮತ್ತೆ ಕಾಣಿಸಿಕೊಂಡಿದ್ದು, ಮಹಾನಗರಗಳು ಕಟ್ಟೆಚ್ಚರವಾಗಿವೆ. ಏಷ್ಯಾದ ಮಹಾನಗರಗಳಾದ ಹಾಂಗ್‌ಕಾಂಗ್, ಸಿಂಗಾಪುರ, ಥೈಲ್ಯಾಂಡ್‌ನಲ್ಲಿ ಪ್ರಕರಣಗಳು ಹೆಚ್ಚಾಗಿ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆಯೂ ಏರಿಕೆಯಾಗುತ್ತಿದೆ.

Related Articles

Back to top button