GIT add 2024-1
Kore@40
Beereshwara 33

ಕರ್ನಾಟಕದಲ್ಲಿ ಮರಾಠಿ ಇದ್ದರೆ, ಮಹಾರಾಷ್ಟ್ರದಲ್ಲಿ ಕನ್ನಡವೇಕಿಲ್ಲ?

Anvekar 3
Cancer Hospital 2

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಲೋಕಸಭಾ ಚುನಾವಣೆಯಲ್ಲಿ ಬಳಸುವ ಇ.ವಿ.ಎಮ್. ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಹೆಸರನ್ನು ಬಳಸುವಾಗ ಗಡಿ ಕನ್ನಡಿಗರಿಗೆ ಆಗಬಹುದಾದ ಭಾಷಾ ತಾರತಮ್ಯ ಅನ್ಯಾಯವನ್ನು ಸರಿಪಡಿಸುವಂತೆ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಆಗ್ರಹಿಸಿದೆ.
ಈ ಕುರಿತು ಮುಖ್ಯ ಚುನಾವಣಾ ಆಯುಕ್ತರಿಗೆ ಅಧ್ಯಕ್ಷ ಅಶೋಕ ಚಂದರಗಿ ಪತ್ರ ಬರೆದಿದ್ದಾರೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಚಿಕ್ಕೋಡಿ, ಬೆಳಗಾವಿ, ಬೀದರ, ಉತ್ತರ ಕನ್ನಡ ಲೋಕಸಭಾ ಮತಕ್ಷೇತ್ರಗಳಲ್ಲಿ ಬಳಸುವ ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಹೆಸರುಗಳನ್ನು ಕನ್ನಡದ ಜೊತೆಗೆ ಮರಾಠಿಯಲ್ಲಿಯೂ ಸಹ ಮುದ್ರಿಸಲು ಚುನಾವಣಾ ಆಯೋಗವು ನಿರ್ದೇಶನ ನೀಡಿದೆಯೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

Emergency Service

ಈ ಮತಕ್ಷೇತ್ರಗಳಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿ ಇರುವದರಿಂದ ಮರಾಠಿ ಭಾಷೆಯನ್ನು ಬಳಸಲು ಆದೇಶ ನೀಡಲಾದೆಯೆಂದು ಹೇಳಲಾಗುತ್ತಿದೆ. ಆದರೆ ಮಹಾರಾಷ್ಟ್ರದಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳಾದ ಸೊಲ್ಲಾಪುರ, ಸಾಂಗ್ಲಿ, ಜತ್ತ, ಅಕ್ಕಲಕೋಟಗಳಲ್ಲಿ ಮರಾಠಿಯ ಜೊತೆಗೆ ಕನ್ನಡವನ್ನು ಬಳಸುವ ಸಂಬಂಧ ಆಯೋಗವು ನಿರ್ಧಾರ ಕೈಕೊಂಡಿಲ್ಲ.

ಕೇವಲ ಕರ್ನಾಟಕದ ನಾಲ್ಕು ಲೋಕಸಭಾ ಮತಕ್ಷೇತ್ರಗಳಲ್ಲಿ ಕನ್ನಡ ಜೊತೆಗೆ ಮರಾಠಿಯನ್ನು ಬಳಸಲು ಆದೇಶ ನೀಡುವ ಮೂಲಕ ಆಯೋಗವು ಗಡಿ ಭಾಗದ ಕನ್ನಡಿಗರಿಗೆ ಅನ್ಯಾಯ ಮಾಡಿದೆ. ಭಾಷಾ ತಾರತಮ್ಯವನ್ನು ಎಸಗಿದೆ. ಅದೇ ರೀತಿ ಗೋವಾದಲ್ಲೂ ಸಹ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದರೂ ಅಲ್ಲಿ ಕನ್ನಡ ಬಳಸುವ ಸಂಬಂಧ ಯಾವುದೇ ನಿರ್ದೇಶನ ನೀಡಲಾಗಿಲ್ಲ ಎಂದು ಅವರು ಆಕ್ಷೇಪಿಸಿದ್ದಾರೆ.
ಆದ್ದರಿಂದ ತಾವು ಈ ಭಾಷಾ ತಾರತಮ್ಯವನ್ನು ಹೋಗಲಾಡಿಸಿ ಮಹಾರಾಷ್ಟ್ರ ಹಾಗೂ ಗೋವಾದಲ್ಲಿರುವ ಹೊರನಾಡ ಕನ್ನಡಿಗರಿಗೆ ನ್ಯಾಯ ಒದಗಿಸಿಕೋಡಬೇಕೆಂದು ಕೋರುತ್ತೇವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

Laxmi Tai add
Bottom Add3
Bottom Ad 2