Belagavi NewsBelgaum NewsKannada NewsKarnataka News

*ಕರ್ನಾಟಕ ಸಂಭ್ರಮ: ಜ್ಯೋತಿ ರಥಯಾತ್ರೆ ಬೀಳ್ಕೊಡುಗೆ*

ಪ್ರಗತಿವಾಹಿನಿ ಸುದ್ದಿ:  ಕರ್ನಾಟಕ ಸಂಭ್ರಮ-50 ರ ಅಂಗವಾಗಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಜ್ಯೋತಿ ರಥಯಾತ್ರೆಯನ್ನು ಶನಿವಾರ(ಜೂ.14) ಬೆಳಗಾವಿ ಜಿಲ್ಲೆಯಿಂದ ಬೀಳ್ಕೊಡಲಾಯಿತು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ‌ ಜಂಟಿ ನಿರ್ದೇಶಕರಾದ ಕೆ.ಎಚ್.ಚನ್ನೂರ‌ ಹಾಗೂ ಉಪ ನಿರ್ದೇಶಕರಾದ ವಿದ್ಯಾವತಿ ಭಜಂತ್ರಿ ಉಪಸ್ಥಿತರಿದ್ದರು.

ಕನ್ನಡಪರ ಸಂಘಟನೆಗಳ ಮುಖಂಡ ಅನಂತಕುಮಾರ್ ಬ್ಯಾಕೂಡ್, ಕಸ್ತೂರಿ ಭಾಂವಿ, ಯು.ಎಂ.ಧೋಂಗಡಿ, ಎಂ.ವೈ.ಮೆಣಸಿನಕಾಯಿ, ವಿಠ್ಠಲ್, ಶ್ರೀರಂಗ ಜೋಶಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

Home add -Advt

ಫೆಬ್ರವರಿ 28 ರಂದು ಬೆಳಗಾವಿ ಜಿಲ್ಲೆಗೆ ಆಗಮಿಸಿದ್ದ ರಥಯಾತ್ರೆಯು ಜಿಲ್ಲೆಯಾದ್ಯಂತ ಸಂಚರಿಸಿದ ಬಳಿಕ ಸವದತ್ತಿ ಮೂಲಕ ಧಾರವಾಡ ಜಿಲ್ಲೆಗೆ ತೆರಳಬೇಕಿತ್ತು.

ಲೋಕಸಭಾ ಚುನಾವಣೆಯ‌ ಮಾದರಿ ನೀತಿಸಂಹಿತೆ ಜಾರಿಗೆ ಬಂದ ಹಿನ್ನೆಲೆಯಲ್ಲಿ ರಥಯಾತ್ರೆಯನ್ನು ಬೆಳಗಾವಿ ನಗರದ‌ ಕಲಾರಂಗ ಮಂದಿರದಲ್ಲಿ ಉಳಿಸಿಕೊಳ್ಳಲಾಗಿತ್ತು. ಚುನಾವಣಾ ನೀತಿಸಂಹಿತೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಗೆ ಬೀಳ್ಕೊಡಲಾಯಿತು.

Related Articles

Back to top button