Latest

ಭಾರಿ ಮಳೆ: ತಿರುಪತಿಯಲ್ಲಿ ಭೂ ಕುಸಿತ; ಪ್ರವಾಹ ಭೀತಿಯಲ್ಲಿ ಭಕ್ತಾದಿಗಳು

ಪ್ರಗತಿವಾಹಿನಿ ಸುದ್ದಿ; ಹೈದರಾಬಾದ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ವಿವಿಧೆಡೆ ಭಾರಿ ಮಳೆಯಾಗುತ್ತಿದ್ದು, ತಿರುಪತಿ ತಿಮ್ಮಪ್ಪನ ಸನ್ನಿದಾನದಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.

ಆಂಧ್ರಪ್ರದೇಶದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಚಿತ್ತೂರು ಹಾಗೂ ಕಡಪ ಜಿಲ್ಲೆಗಳಲ್ಲಿ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ತಿರುಪತಿಯಲ್ಲಿ 13 ಕಡೆ ಭೂಕುಸಿತವುಂಟಾಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ರಸ್ತೆಗಳಲ್ಲಿ ಮಳೆ ನೀರು ತುಂಬಿ ಹರಿಯುತ್ತಿದೆ. ತಿರುಪತಿಯಲ್ಲಿನ ಎರಡು ಘಾಟ್ ಗಳನ್ನು ಬಂದ್ ಮಾಡಲಾಗಿದೆ.

ತಿರುಪತಿಯಲ್ಲಿ ಜಲದಿಗ್ಭಂದನವಾದಂತೆ ಭಾಸವಾಗುತ್ತಿದ್ದು, ಎರಡು ದಿನಗಳ ಕಾಲ ತಿರುಪತಿ-ತಿರುಮಲ ದೇವಾಲಯವನ್ನು ಬಂದ್ ಮಾದಲಾಗಿದೆ. ಹಲವು ಭಕ್ತರು ತಿರುಪತಿಯಲ್ಲಿಯೇ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಕಡಪ ಜಿಲ್ಲೆಯಲ್ಲಿ ಶೇಷಮಾಂಬಪುರ, ಮಂದಪಲ್ಲಿ, ನಂದಲೂರು, ಆಕೆಪಾಡು ಸೇರಿದಂತೆ ಹಲವು ಗ್ರಾಮಗಳು ಜಲಾವೃತಗೊಂಡಿದ್ದು, 30 ಜನರು ನಾಪತ್ತೆಯಾಗಿದ್ದಾರೆ. ಇದುವರೆಗೂ ಮೂವರ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಕುಸಿದ ಮನೆ ಗೋಡೆ; ಒಂದೇ ಕುಟುಂಬದ 9 ಜನ ಸಾವು

Home add -Advt

Related Articles

Back to top button