
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ 8 ಜನರಿಗೆ ವಿವಿಧ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಚೆಕ್ ಗಳನ್ನು ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ವಿತರಿಸಿದರು.
ಮಂಗಳವಾರ ಬೆಳಗ್ಗೆ ನಡೆದ ಸರಳ ಕಾರ್ಯಕ್ರಮದಲ್ಲಿ ಅವರು ಚೆಕ್ ಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು.


ಗೌರವ್ವ ಯ ಬಂಬರಗಿ ಸಾ. ಯದ್ದಲಭಾವಿಹಟ್ಟಿ, ಮಂಗಲಾ ದು ಅಂಡೋಚೆ ಸಾ. ಸೋನೊಲಿ, ವಿರುಪಾಕ್ಷಿ ಕ ಹೊಸಮನಿ ಸಾ. ಸುಳೇಭಾವಿ, ನೀಲಕಂಠ ಬಾ ಪತ್ತಾರ ಸಾ. ಕಂಗ್ರಾಳಿ ಕೆ ಎಚ್. , ಸಂತೋಷ ಬಾ ತೊಲಗಿ ಸಾ. ಮುತಗಾ, ಶಿವಾಜಿ ಬಾ ಲಖನಗೌಡ ಸಾ. ಸುಳೇಭಾವಿ, ಶಾಂತಾ ಸು ಲಕಮನ್ನವರ ಸಾ. ಕಮಕಾರಟ್ಟಿ, ಅಶೋಕ ಶಿ ಕಾಂಬಳೆ ಸಾ. ಕ್ರಾಂತಿನಗರ ಗಣೇಶಪುರ -ಇವರಿಗೆ ಪರಿಹಾರದ ಚೆಕ್ ನೀಡಲಾಯಿತು.
ಚೆಕ್ ಗಳನ್ನು ವಿತರಿಸುವ ಸಂದರ್ಭದಲ್ಲಿ ಯುವರಾಜ ಕದಂ, ಬಾಪುಗೌಡ ಪಾಟೀಲ, ಚನ್ನರಾಜ ಹಟ್ಟಿಹೋಳಿ, ಮೃಣಾಲ ಹೆಬ್ಬಾಳಕರ್ ಹಾಗೂ ಫಲಾನುಭವಿಗಳು ಉಪಸ್ಥಿತರಿದ್ದರು.
ಆರೋಗ್ಯದ ಕಡೆಗೆ ಎಲ್ಲರೂ ಗಮನ ನೀಡಬೇಕು. ಆರೋಗ್ಯವಿದ್ದರೆ ಎಲ್ಲವೂ ಇದ್ದಂತೆ. ಹಾಗಾಗಿ ಬಹಳ ಕಾಳಜಿಯಿಂದ ಆರೋಗ್ಯ ಕಾಪಾಡಿಕೊಳ್ಳಿ
-ಲಕ್ಷ್ಮಿ ಹೆಬ್ಬಾಳಕರ್