Kannada NewsKarnataka NewsLatest

ಸಚಿವರ ಪುಸ್ತಕ ಪ್ರೀತಿ: ಗ್ರಂಥಾಲಯಕ್ಕೆ ಬಂತು ಸಾವಿರಾರು ಪುಸ್ತಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಪುಸ್ತಕ ಪ್ರೀತಿಯಿಂದಾಗಿ ಗ್ರಾಮೀಣ ಗ್ರಂಥಾಲಯಗಳಿಗೆ ಸಾವಿರಾರು ಪುಸ್ತಕಗಳು ಪ್ರಾಪ್ತಿಯಾಗಿವೆ.

ಪ್ರಿಯಾಂಕ್ ಖರ್ಗೆ ಅವರು ಸಚಿವರಾದ ನಂತರ ಕಾರ್ಯಕ್ರಮಗಳಿಗೆ ಹೋದಲ್ಲಿ ಪುಷ್ಪಗುಚ್ಛ, ಹೂಮಾಲೆ ಮತ್ತು ಶಾಲುಗಳಂತಹ ಸಾಂಪ್ರದಾಯಿಕ ವಸ್ತುಗಳನ್ನು ಸ್ವೀಕರಿಸುತ್ತಿಲ್ಲ. ಹಾರ, ಶಾಲೆ ಬದಲಾಗಿ, ಗ್ರಾಮೀಣ ಗ್ರಂಥಾಲಯಗಳಿಗೆ ದೇಣಿಗೆಗಾಗಿ ಪುಸ್ತಕಗಳನ್ನು ನನಗೆ ಉಡುಗೊರೆಯಾಗಿ ನೀಡಿ ಎಂದು ಜನರಲ್ಲಿ ವಿನಂತಿಸಿದ್ದರು.

Home add -Advt

ಕಳೆದ ಆರು ತಿಂಗಳಲ್ಲಿ ಜನರಿಂದ ಸಾವಿರಾರು ಪುಸ್ತಕಗಳು ಅವರಿಗೆ ಬಂದಿವೆ. ಅವುಗಳನ್ನೆಲ್ಲ ಅವರು ಗ್ರಾಮೀಣ ಗ್ರಂಥಾಲಯಗಳಿಗೆ ಕೊಡಲು ನಿರ್ಧರಿಸಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಅವರು, “ಅರಿವೇ ಗುರು” ಎನ್ನುವ ಊಕ್ತಿಯನ್ನು ಉಲ್ಲೇಖಿಸಿದ್ದಾರೆ.

ನನಗೆ ಇಷ್ಟೆಲ್ಲಾ ಪುಸ್ತಕಗಳನ್ನು ನೀಡಿದ ಎಲ್ಲರಿಗೂ ನಾನು ಕೃತಜ್ಞನಾಗಿದ್ದೇನೆ. ಈ ಕೊಡುಗೆಗಳಿಂದ ನಮ್ಮ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಹಾಗೂ ಯುವ ಜನರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ. ಮೌಢ್ಯ ತುಂಬಿದ ಜಗದಲ್ಲಿ ಜ್ಞಾನದ ಸಾಕ್ಷರತೆಯತ್ತ ಇದು ನಮ್ಮ ಪುಟ್ಟ ಹೆಜ್ಜೆ ಎಂದು ಅವರು ಹೇಳಿದ್ದಾರೆ.

Related Articles

Back to top button