Uncategorized

*ಸಚಿವರುಗಳ ವಿರುದ್ಧ ಶಾಸಕರ ಅಸಮಾಧಾನ; ಪತ್ರ ಬರೆದು ಸಿಎಂಗೆ ದೂರು?*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಸರ್ಕಾರದಲ್ಲಿ ಅಸಮಾಧಾನ ಸ್ಫೋಟಗೊಂಡಿದೆ ಎಂಬ ಮಾತು ಕೇಳಿಬರುತ್ತಿದೆ. ಶಾಸಕರು ತಮ್ಮದೇ ಸರ್ಕಾರದ ಸಚಿವರುಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದಿದ್ದಾರೆ ಎಂದು ತಿಳಿದುಬಂದಿದೆ.

ಕಳೆದ ಶಾಸಕಾಂಗ ಪಕ್ಷದ ಸಭೆಯಲ್ಲಿಯೇ ಕೆಲ ಶಾಸಕರು ಸಚಿವರುಗಳ ವಿರುದ್ಧ ದೂರಿದ್ದರು. ಇದೀಗ ಪತ್ರ ಬರೆದು ಸಿಎಂ ಸಿದ್ದರಾಮಯ್ಯನವರಿಗೆ ದೂರು ನೀಡಿದ್ದಾರೆ. ಕೆಲ ಸಚಿವರುಗಳು ದುರಹಂಕಾರ ಮಾಡುತ್ತಿದ್ದಾರೆ. ಕೆಲಸ ಮಾಡಿಕೊಡುವ ಆಸಕ್ತಿಯೂ ಅವರಿಗಿಲ್ಲ. ದುರಹಂಕಾರ ತೋರುವ ಸಚಿವರಿಗೆ ಬುದ್ದಿ ಹೇಳಿ ಎಂದು ದೂರಿದ್ದಾರೆ.

Home add -Advt

ಸಚಿವಸ್ಥಾನ ಸಿಗದೇ ಈಗಗಾಲೇ ಅಸಮಾಧಾನಗೊಂಡಿರುವ ಬಸವರಾಜ್ ರಾಯರೆಡ್ಡಿ, ಎಂ.ಕೃಷ್ಣಪ್ಪ ಸೇರಿದಂತೆ ಹಲವರು ಶಾಸಕರು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣ ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಜುಲೈ 27ರಂದು ಸಭೆ ಕರೆದಿದ್ದಾರೆ ಎಂದು ತಿಳಿದುಬಂದಿದೆ.


Related Articles

Back to top button