Kannada NewsKarnataka News

ಸೋಮವ್ವ ಅಂಗಡಿ ನಿಧನಕ್ಕೆ ಸಂಜಯ ಪಾಟೀಲ ಸಂತಾಪ

 ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಈ ನಾಡಿಗೆ ಕೇಂದ್ರ ರೈಲ್ವೆ ಸಚಿವ ದಿವಂಗತ ಸುರೇಶ್ ಅಂಗಡಿ ಅಂತಹ ಮಹಾನ್ ನಾಯಕರನ್ನು ಕೊಟ್ಟಿದ್ದ ನಮ್ಮೆಲ್ಲರ ಮಾತೃ ಸ್ವರೂಪಿಣಿ  ಸೋಮವ್ವ ಚನ್ನಬಸಪ್ಪ ಅಂಗಡಿ ಅವರ ಮರಣ ನಮ್ಮೆಲ್ಲರಿಗೂ ಬಹಳ ದುಃಖ ತಂದಿದೆ ಎಂದು ಬಿಜೆಪಿ ಗ್ರಾಮೀಣ ಜಿಲ್ಲಾಧ್ಯಕ್ಷ, ಮಾಜಿ ಶಾಸಕ ಸಂಜಯ ಪಾಟೀಲ ಸಂತಾಪ ಸೂಚಿಸಿದ್ದಾರೆ.
ನಿಜವಾಗಲೂ ತಾಯಿ ಮತ್ತು ಮಕ್ಕಳ ನಡುವಿನ ಪ್ರೀತಿ ವಾತ್ಸಲ್ಯ ಹೇಗಿರಬೇಕೆಂಬುದನ್ನು ದಿವಂಗತ ಸುರೇಶ್ ಅಂಗಡಿ ಹಾಗೂ ಅವರ ತಾಯಿಯವರು ತೋರ್ಪಡಿಸುತ್ತಿದ್ದ ಪ್ರೀತಿ ಇಂದು ಈ ಭಾಗಕ್ಕೆ ಒಂದು ನಿದರ್ಶನವಾಗಿತ್ತು. ಆದರೆ ಇಂದು ಅದೆಲ್ಲವೂ ನಮಗೆ ನೆನಪು ಮಾತ್ರ, ಏಕೆಂದರೆ 6 ತಿಂಗಳ ಹಿಂದೆ ಬೆಳಗಾವಿ ಜಿಲ್ಲೆಯ ಸಂಸದರು ಕೇಂದ್ರ ಸಚಿವರಾದ ಸುರೇಶ್ ಅಂಗಡಿಯವರನ್ನು ಕಳೆದುಕೊಂಡು ಇಡೀ ನಾಡೇ ದುಃಖದಲ್ಲಿ ಇದ್ದಾಗ ಆ ದುಃಖವನ್ನು ಎಲ್ಲರೂ ಸಹಿಸಿಕೊಂಡರು, ಮಾತೃ ಹೃದಯ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂಬುವುದನ್ನು ಇವತ್ತು ಸೋಮವ್ವ ತಾಯಿ ಮತ್ತೊಮ್ಮೆ ಉದಾಹರಣೆಯಾಗಿದ್ದಾರೆ. ಅವರ ಮಗ ಸುರೇಶ ಅಂಗಡಿಯವರ ನಿಧನದ ದುಃಖದ ಮಡುವಿನಲ್ಲಿ ತಾವು ಕೂಡ ಮಗನ ಜೊತೆ ಸೇರಿರುವುದು ನಮ್ಮೆಲ್ಲರಿಗೂ ತುಂಬಲಾರದ ಹಾನಿಯಾಗಿದೆ.  ಅಂಗಡಿ ಕುಟುಂಬಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು  ಸಂಜಯ ಪಾಟೀಲ ಕಂಬನಿ ಮೀಡಿದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button