Belagavi NewsBelgaum NewsKannada NewsKarnataka NewsPolitics

*ಚತುಷ್ಪಥ ರಸ್ತೆ ಕಾಮಗಾರಿ ವೀಕ್ಷಿಸಿದ ಸಂಸದ ಶೆಟ್ಟರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ- ಹುನಗುಂದ – ರಾಯಚೂರು  ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ನಿರ್ಮಿಸುತ್ತಿರುವ ಚತುಷ್ಪಥ ರಸ್ತೆಯ ಕಾಮಗಾರಿಯ ಪ್ರಗತಿಯ ಕುರಿತು ತಿಳಿಯಲು ಬೆಳಗಾವಿ ಸಂಸದ ಜಗದೀಶ ಶೆಟ್ಟರ ಇವರು ಇಂದು ಸ್ಥಳಕ್ಕೆ ಭೇಟಿ ನೀಡಿ, ವೀಕ್ಷಿಸಿದರು.

ಬೆಳಗಾವಿ ಶೇಗಣಮಟ್ಟಿ ಗ್ರಾಮದ ಹತ್ತಿರದಿಂದ ಪ್ಯಾಕೇಜ -1 ರಡಿ 42 ಕಿ.ಮಿ ರಸ್ತೆ ನಿರ್ಮಾಣವಾಗುತ್ತಿದ್ದು, ಈ ಕಾಮಗಾರಿ ಸ್ಥಳ ವೀಕ್ಷಣೆಯನ್ನು ಸಂಸದರಾದ ಜಗದೀಶ ಶೆಟ್ಟರ ಇವರು ಕೈಕೊಂಡರು.

Home add -Advt

ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಬಿಜೆಪಿ ಜಿಲ್ಲಾಧ್ಯಕ್ಷರಾದ ಸುಭಾಸ ಪಾಟೀಲ, ಬೆಳಗಾವಿ ಮಹಾನಗರ ಜಿಲ್ಲಾಧ್ಯಕ್ಷರಾದ ಗೀತಾ ಸುತಾರ, ಪಕ್ಷದ ಮುಖಂಡರಾದ ಮಾರುತಿ ಜಿರಲಿ,  ಆರ್.ಎಸ್ ಮುತಾಲಿಕ, ರಮೇಶ ದೇಶಪಾಂಡೆ ಮುರಗೇಂದ್ರಗೌಡ ಪಾಟೀಲ, ಹಾಗೂ ಇತರೆ ಪದಾಧಿಕಾರಿಗಳು ಭಾಗವಹಿಸಿದ್ದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಅಭಿಯಂತರರಾದ  ಕಿಶೋರ ಮತ್ತು ಕಿರಿಯ ಅಧಿಕಾರಿಗಳು ಪ್ರಸ್ತಾಪಿತ ಯೋಜನೆಯ ವಿವರಗಳನ್ನು ಸಂಸದರಾದ ಜಗದೀಶ ಶೆಟ್ಟರ ಅವರೊಂದಿಗೆ ಹಂಚಿಕೊಂಡರು.

Related Articles

Back to top button