
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಸಾರ್ವಜನಿಕ ಶಿಕ್ಷಣ ಇಲಾಖೆಯ ನಿವೃತ್ತ ನಿರ್ದೇಶಕ ಎಸ್.ಜಯಕುಮಾರ ಕೊರೋನಾದಿಂದಾಗಿ ನಿಧನರಾಗಿದ್ದಾರೆ. ಅವರಿಗೆ 63 ವರ್ಷ ವಯಸ್ಸಾಗಿತ್ತು.
ಶಿಕ್ಷಣ ಇಲಾಖೆಯಲ್ಲಿ ಹಲವಾರು ಹುದ್ದೆಗಳಲ್ಲಿ ಕೆಲಸ ನಿರ್ವಹಿಸಿದ್ದ ಅವರು 3 ವರ್ಷಗಳ ಹಿಂದೆ ನಿವೃತ್ತರಾಗಿದ್ದರು. ಬೆಳಗಾವಿ ಕಾರವಾರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಉಪನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಅತ್ಯಂತ ಜನಪ್ರಿಯ, ಜನಸ್ನೇಹಿ ಅಧಿಕಾರಿ ಎನಿಸಿದ್ದರು.
ಪ್ರಾಥಮಿಕ ಶಿಕ್ಷಣ ನಿರ್ದೇಶಕರಾಗಿ, ಆಂಗ್ಲ ಭಾಷೆ ಪ್ರಾದೇಶಿಕ ಕೇಂದ್ರದ ನಿರ್ದೇಶಕರಾಗಿ, ಧಾರವಾಡದ ಆಯುಕ್ತರ ಕಚೇರಿ ಹೆಚ್ಚುವರಿ ಆಯುಕ್ತರಾಗಿ, ವೊಕೇಶನಲ್ ಎಜುಕೇಶನ್ ನಿರ್ದೇಶಕರಾಗಿ, ಪಿಯು ನಿರ್ದೇಶಕರಾಗಿ, ಸಂಶೋಧನೆ ಮತ್ತು ತರಬೇತಿ ನಿರ್ದೇಶಕರಾಗಿ, ಅಕ್ಷರ ದಾಸೋಹದ ನಿರ್ದೇಶಕರಾಗಿ, ಕೇಂದ್ರ ಪ್ರವೇಶಾತಿ ಸೆಲ್ ಉಪನಿರ್ದೇಶಕರಾಗಿ, ಬೆಳಗಾವಿ, ಕಾರವಾರಗಳಲ್ಲಿ ಉಪನಿರ್ದೇಶಕರಾಗಿ, ಮಂಗಳೂರು, ಗುಬ್ಬಿ, ತುಮಕೂರು, ಶೃಂಗೇರಿ, ಚನ್ನರಾಯ ಪಟ್ಟಣಗಳಲ್ಲಿ ವಿವಿಧ ಹುದ್ದೆಗಳಲ್ಲಿ ಅವರು ಕೆಲಸ ನಿರ್ವಹಿಸಿದ್ದರು.
ಪ್ರಗತಿವಾಹಿನಿಯಲ್ಲೂ ಹಲವಾರು ಲೇಖನಗಳನ್ನು ಅವರು ಬರೆದಿದ್ದರು. ಶಿಕ್ಷಣ ಇಲಾಖೆಯ ಸುಧಾರಣೆಗೆ ಬಹಳಷ್ಟು ಕೊಡುಗೆ ನೀಡಿದ್ದರು.
ಅವರಿಗೆ ಹೆಂಡತಿ, ಮಗ – ಸೊಸೆ, ಮಗಳು -ಅಳಿಯ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ. ಶಿಕ್ಷಣ ಇಲಾಖೆಗೆ ದೊಡ್ಡ ಆಸ್ತಿಯಾಗಿದ್ದರು.
ಶೆಟ್ಟರ್ ಗೆ ಆಕ್ಸಿಜನ್, ಅಶ್ವತ್ಥನಾರಾಯಣಗೆ ರೆಮ್ ಡಿಸಿವರ್, ಬೊಮ್ಮಾಯಿ, ಅಶೋಕಗೆ ಬೆಡ್, ಲಿಂಬಾವಳಿಗೆ ವಾರ್ ರೂಂ