Politics

*ನನ್ನನ್ನು ಕರೆದಿಲ್ಲ; ಅವರು ಯಾಕೆ ಹೋಗಿದ್ದಾರೆ ಗೊತ್ತಿಲ್ಲ ಎಂದ ಗೃಹ ಸಚಿವ ಪರಮೇಶ್ವರ್*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ದೆಹಲಿ ಪ್ರವಾಸದ ವಿಚಾರವಾಗಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಪರಮೇಶ್ವರ್, ಸಿಎಂ, ಡಿಸಿಎಂ ದೆಹಲಿಗೆ ಹೋಗಿದ್ದಾರೆ. ಯಾಕೆ ಹೋಗಿದ್ದಾರೆ ಎಂದು ಗೊತ್ತಿಲ್ಲ ಎಂದರು.

Home add -Advt

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪರಮೇಶ್ವರ್, ನನ್ನನ್ನು ಹೈಕಮಾಂಡ್ ದೆಹಲಿಗೆ ಕರೆದಿಲ್ಲ. ಕರೆದರೆ ನಾನೂ ಹೋಗುತ್ತೇನೆ. ಸಿಎಂ, ಡಿಸಿಎಂ ಅವರಿಗೆ ಹೈಕಮಾಂಡ್ ಕರೆದ ಕಾರಣ ಅವರು ದೆಹಲಿಗೆ ಹೋಗಿದ್ದಾರೆ. ಯಾವ ಅಜೆಂಡಾ ವಿಚಾರವಾಗಿ ಹೋಗಿದ್ದಾರೆ ನನಗೆ ಗೊತ್ತಿಲ್ಲ. ನನ್ನ ಕರೆದಿಲ್ಲ, ನಾನು ಹೋಗಿಲ್ಲ ಎಂದು ಹೇಳಿದರು.

ಇನ್ನು ಕಾಲ್ತುಳಿತ ದುರಂತ ವಿಚಾರವಾಗಿ ವಾಸ್ತವ ಏನಿದೆ ಅಂತಾ ನ್ಯಾಯಾಲಯಕ್ಕೆ ವರದಿ ನೀಡುತ್ತೇವೆ. ಸರ್ಕಾರದ ಪರ ಏನು ಮಾತನಾಡಬೇಕು ಎಂಬುದನ್ನು ನಿನ್ನೆಯೇ ಸಭೆ ನಡೆಸಿ ಚರ್ಚಿಸಲಾಗಿದೆ ಎಂದು ಹೇಳಿದರು.

Related Articles

Back to top button