Film & Entertainment

“ಸರಜೂಕಾಟ್ಕರ್ ಕಾದಂಬರಿ ಆಧಾರಿತ ದಂತಪುರಾಣ ‘ ಚಲನಚಿತ್ರಕ್ಕೆ ಮೂರು ಪ್ರಶಸ್ತಿ

ಪ್ರಗತಿವಾಹಿನಿ ಸುದ್ದಿ: ಖ್ಯಾತ ಲೇಖಕ ಹಾಗೂ ಹಿರಿಯ ಪತ್ರಕರ್ತ ಬೆಳಗಾವಿಯ ಡಾ ಸರಜೂ ಕಾಟ್ಕರ್ ಅವರು ಬರೆದ ‘ಗೌರೀಪುರ’ ಕಾದಂಬರಿ ಆಧಾರಿತ ‘ದಂತಪುರಾಣ ‘ ಚಲನಚಿತ್ರಕ್ಕೆ ರಾಜ್ಯ ಸರ್ಕಾರದ ಮೂರು ಪ್ರಶಸ್ತಿಗಳು ಬಂದಿವೆ.

ಖ್ಯಾತ ನಿರ್ದೇಶಕ ವಿಶಾಲರಾಜ್ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.
ಚಲನಚಿತ್ರದಲ್ಲಿ ಅಭಿನಯಿಸಿದ ಮಂಜುಳಮ್ಮ (ಅಜ್ಜಿ) ಅವರಿಗೆ ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ, ಮಾಸ್ಟರ್ ಅಹಿಲ್ ಅನ್ಸಾರಿ ಗೆ (ಅಜ್ಜಿಯ ಮೊಮ್ಮಗ ಪಾತ್ರ) ಅತ್ಯುತ್ತಮ ಬಾಲ ನಟ ಪ್ರಶಸ್ತಿ ಹಾಗೂ ಚಲನಚಿತ್ರದ ಗಾಯಕಿ ಅರುಂಧತಿ ವಶಿಷ್ಠ ಅವರಿಗೆ ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿಗಳು ಬಂದಿವೆ.

‘ಗೌರೀಪುರ’ ಕಾದಂಬರಿಯು ಅಜ್ಜಿ ಮತ್ತು ಅವಳ ಮೊಮ್ಮಗನ ಸುತ್ತ ತಿರುಗುತ್ತ ಹಳೆಯ ಮತ್ತು ಹೊಸ ಮೌಲ್ಯಗಳ ಸಂಘರ್ಷವನ್ನು ಬಲು ಪರಿಣಾಮಕಾರಿಯಾಗಿ ಅನಾವರಣಗೊಳ್ಳಿಸಿದ ಕಾದಂಬರಿಯಾಗಿದೆ. ಕಾದಂಬರಿ ಯನ್ನು ಹೊಸಪೇಟೆಯ ಗಣೇಶ ಯಾಜಿ ಹಾಗೂ ಸವಿತಾ ಯಾಜಿಯವರ ಯಾಜಿ ಪ್ರಕಾಶನವು ಪ್ರಕಟಿಸಿದೆ.

ಈ ಚಲನಚಿತ್ರದ ಎಲ್ಲ ಹಾಡುಗಳನ್ನು ಪ್ರಖ್ಯಾತ ಕವಿ ಸತೀಶ ಕುಲಕರ್ಣಿ ಬರೆದಿದ್ದಾರೆ. ಸಂಭಾಷಣೆಯನ್ನು ಪ್ರಖ್ಯಾತ ರಂಗಕರ್ಮಿ ಹಾಗೂ ನಟ , ನಿರ್ದೇಶಕ ಶ್ರೀಪತಿ ಮಂಜನಬೈಲು ಬರೆದಿದ್ದಾರೆ.

Home add -Advt

ಈ ಹಿಂದೆ ಡಾ ಸರಜೂ ಕಾಟ್ಕರ್ ಅವರು ಬರೆದ ಕಾದಂಬರಿ ‘ ದೇವರಾಯ’ ವು ‘ಇಂಗಳೆ ಮಾರ್ಗ ‘ ಎಂಬ ಹೆಸರಿನಲ್ಲಿ , ‘ ಜುಲೈ ೨೨,೧೯೪೭ ‘ ಕಾದಂಬರಿಯು ಅದೇ ಹೆಸರಿನಲ್ಲಿ , ‘ಸಾವಿತ್ರಿಬಾಯಿ ಫುಲೆ ‘ ಕಾದಂಬರಿಯು ಅದೇ ಹೆಸರಿನಲ್ಲಿ ಚಲನಚಿತ್ರ ಗಳಾಗಿ ರಾಜ್ಯ, ಅಂತಾರಾಜ್ಯ ಹಾಗೂ ಅಂತರ ರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನವಾಗಿದ್ದವು. ‘ಬಾಜೀರಾವ ಮಸ್ತಾನಿ ‘ ಎಂಬ ಅವರ ಕನ್ನಡ ಕಾದಂಬರಿಯ ಇನ್ ಪುಟ್ ಗಳನ್ನು ಹಿಂದಿ ಚಲನಚಿತ್ರ ‘ಬಾಜೀರಾವ ಮಸ್ತಾನಿ’ ಯಲ್ಲಿ ಅಳವಡಿಸಲಾಗಿತ್ತು. ಆ ಚಲನಚಿತ್ರವೂ ಅನೇಕ ಪ್ರಶಸ್ತಿಗಳಿಗೆ ಭಾಜನವಾಗಿತ್ತು.

ಡಾ ಸರಜೂ ಕಾಟ್ಕರ್ ಅವರ ಇನ್ನೊಂದು ಕಾದಂಬರಿ ‘ದಂಗೆ’ ಚಲನಚಿತ್ರವಾಗುತ್ತಿದೆ. ಇತ್ತೀಚೆಗೆ ಪ್ರಕಟವಾಗಿರುವ ಅವರ ‘ಛತ್ರಪತಿ ಶಿವಾಜಿ The Great Maratha ‘ ಕಾದಂಬರಿಯನ್ನು ಚಲನಚಿತ್ರವನ್ನಾಗಿಸುವ ಬಗ್ಗೆ ಮಾತುಕತೆಗಳು ನಡೆದಿವೆ.

Related Articles

Back to top button