Kannada NewsKarnataka News

ಸುರೇಶ್ ಅಂಗಡಿ ದಾರಿಯಲ್ಲಿ ಮಂಗಲಾ ಅಂಗಡಿ ಮುಂದುವರಿಯಲಿ

ಪ್ರಗತಿವಾಹಿನಿ ಸುದ್ದಿ, ಗೋಕಾಕ –  ಬೆಳಗಾವಿ ಲೋಕಸಭಾ ಮತಕ್ಷೇತ್ರ ಉಪಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಯಾಗಿ ಮಂಗಲಾ ಸುರೇಶ್ ಅಂಗಡಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಬಿ.ಜೆ.ಪಿ.ಹೈಕಮಾಂಡ್ ಗೆ ಕೃತಜ್ಞತೆ ಸಲ್ಲಿಸಿರುವ ಬಿಜೆಪಿ ಯುವ ಮುಖಂಡ ನಿಖಿಲ್ ಓಸ್ವಾಲ್, ಅವರ ಗೆಲುವಿಗೆಎಲ್ಲರೂ ಸೇರಿ  ಶ್ರಮಿಸುತ್ತೇವೆ ಎಂದಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು,  ಅವರ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ, ಕೆಲಸಕಾರ್ಯಗಳಿಗೆ ನಾನು ಕೈ ಜೋಡಿಸುತ್ತೇನೆ. ದಿವಂಗತ  ಸುರೇಶ್ ಅಂಗಡಿ ಅವರು ಹಾಕಿಕೊಟ್ಟ ದಾರಿಯಲ್ಲಿ ಅವರು ಮುಂದುವರಿಯಲಿ, ರಾಜ್ಯಕ್ಕೆ , ರಾಷ್ಟ್ರಕ್ಕೆ ಒಬ್ಬ ಉತ್ತಮ ರಾಜಕಾರಣಿಯಾಗಿ ಅಭಿವೃದ್ಧಿಯ ಹರಿಕಾರಣಿಯಾಗಿ ಸಾಗಲಿ ಎಂದು ಆಶಿಸುತ್ತೇನೆ ಎಂದಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button