Latest

ಬಿರಿಯಾನಿ ತಿಂದು ಮಲಗಿದ್ರಾ; ಯೋಧರ ಬಗ್ಗೆ ಕೇವಲವಾಗಿ ಮತಾಡಿದ ಓವೈಸಿ

ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಭಾರತದ ಕೆಲ ರಾಜ್ಯಗಳಲ್ಲಿ ಜನಸಂಖ್ಯೆ ಅಸಮತೋಲನಗೊಳ್ಳಲು ಬಾಂಗ್ಲಾದಿಂದ ಅಕ್ರಮವಾಗಿ ವಲಸೆ ಬಂದವರು ಕಾರಣ ಎಂಬ ಆರ್‌ಎಸ್‌ಎಸ್ ಹೇಳಿಕೆಗೆ ತಿರುಗೇಟು ನೀಡುವ ಭರದಲ್ಲಿ ಎಐಎಂಐಎ ಮುಖ್ಯಸ್ಥ ಅಸಾದುದ್ದಿನ್ ಓವೈಸಿ, ಭಾರತದ ಗಡಿ ರಕ್ಷಣಾ ಪಡೆಯ (ಬಿಎಸ್‌ಎಫ್) ಯೋಧರ ಬಗ್ಗೆ ಹಗುರವಾಗಿ ಮಾತಾಡುವ ಮೂಲಕ ಹೊಸ ವಿವಾಧ ಸೃಷ್ಟಿಸಿದ್ದಾರೆ.

ಬಾಂಗ್ಲಾದೇಶದಿಂದ ಅಕ್ರಮವಾಗಿ ಪ್ರವೇಶ ಮಾಡುವಾಗ ಬಿಎಸ್‌ಎಫ್ ಯೋಧರು ಬಿರಿಯಾನಿ ತಿಂದು ಮಲಗಿದ್ರಾ ? ಎಂದು ಓವೈಸಿ ಕೇಂದ್ರ ಸರಕಾರಕ್ಕೆ ಪ್ರಶ್ನೆ ಮಾಡಿದ್ದಾರೆ.

Home add -Advt

ಇದೇ ಸಂದರ್ಭದಲ್ಲಿ ಮತಾಂತರಗೊಂಡವರಿಗೆ ಮೀಸಲಾತಿ ನೀಡುವುದು ಸರಿಯಲ್ಲ ಎಂದು ಸಹ ಓವೈಸಿ ಹೇಳಿದ್ದಾರೆ. ಓವೈಸಿ ಭಾರತದ ಗಡಿ ಕಾಯುವ ಯೋಧರ ಬಗ್ಗೆ ಕೇವಲವಾಗಿ ಮಾತಾಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿದೆ.

ಶಾಲೆಗಳಿಗೆ ಸುತ್ತೋಲೆ ವಿಚಾರ; ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸ್ಪಷ್ಟನೆ

https://pragati.taskdun.com/latest/100rs-per-monthparentsgovt-schooleducation-department-circulerb-c-nagesh-reaction/

Related Articles

Back to top button