Latest

ಕೊಪ್ಪಳ ಜಿಲ್ಲೆ 39 ಕೆರೆಗಳ ತುಂಬಿಸಲು ಯೋಜನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೊಪ್ಪಳ ಜಿಲ್ಲೆಯ 39 ಕೆರೆಗಳನ್ನು ಏತ ನೀರಾವರಿ ಯೋಜನೆ ಮೂಲಕ ತುಂಬಿಸಲು ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದು ಕಾನೂನು, ಸಂಸದೀಯ ವ್ಯವಹಾರಗಳು,ಶಾಸನ ರಚನೆ ಹಾಗೂ ಸಣ್ಣ ನೀರಾವರಿ ಸಚಿವ ಜಿ.ಸಿ.ಮಾಧುಸ್ವಾಮಿ ವಿಧಾನ ಪರಿಷತ್ತಿಗೆ ತಿಳಿಸಿದರು.

ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯೆ ಹೇಮಲತಾ ನಾಯಕ ಅವರ ಪ್ರಶ್ನೆಗೆ ಉತ್ತರ ನೀಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಕೆರೆ ಭರ್ತಿ ಕಾರ್ಯ ವಿಳಂಬವಾಗಿದ್ದರೆ, ತಾವೇ ಖುದ್ದಾಗಿ ಕೊಪ್ಪಳ ಜಿಲ್ಲೆಗೆ ಭೇಟಿ ನೀಡಿ ನೆನೆಗುದಿಗೆ ಬಿದ್ದಿರುವ ಕೆರೆಗಳ ಭರ್ತಿ ಕಾಮಗಾರಿಗೆ ಚಾಲನೆ ನೀಡುವುದಾಗಿ ತಿಳಿಸಿದರು.

ಕೊಪ್ಪಳ ಜಿಲ್ಲೆಯ 122 ಕೆರೆಗಳ ಪೈಕಿ 39 ಕೆರೆಗಳು ಏತ ನೀರಾವರಿ ಯೋಜನೆ ಮೂಲಕ ಕೆರೆ ಭರ್ತಿಗೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಏತ ನೀರಾವರಿ ಯೋಜನೆಯಡಿ ಬಳೂಟಗಿ ಹಾಗೂ ತಳಕಲ್ ಕೆರೆಗಳ ಅಭಿವೃದ್ಧಿಯನ್ನು ಅನುಕ್ರಮವಾಗಿ 100 ಲಕ್ಷ ಮತ್ತು 65 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈ ಪೈಕಿ ಬಳೂಟಗಿ ಕೆರೆ ಕಾಮಗಾರಿ ಪೂರ್ಣಗೊಂಡಿದೆ. ತಳಕಲ್ ಕೆರೆ ಕಾಮಗಾರಿ ಟೆಂಡರ್ ಪ್ರಕ್ರಿಯೆಯಲ್ಲಿದೆ. ಕಳೆದ ಎರಡು ವರ್ಷಗಳಿಂದ ಕೊಪ್ಪಳ ಜಿಲ್ಲೆಯಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸಲು ಸಣ್ಣ ನೀರಾವರಿ ಇಲಾಕೆಯಿಂದ ಜಿನುಗು ಕೆರೆ, ಚೆಕ್ ಡ್ಯಾಂ,ಆಣೆಕಟ್ಟು,ಪಿಕಪ್,ಬಂದಾರ ಮುಂತಾದುವುಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ 642 ಲಕ್ಷ ರೂಪಾಯಿ ಹಣ ಖರ್ಚುಮಾಡಲಾಗಿದೆ ಎಂದು ತಿಳಿಸಿದರು.

ಇದಕ್ಕೂ ಮೊದಲು ಸದಸ್ಯೆ ಹೇಮಲತಾ ನಾಯಕ ಮಾತನಾಡಿ ಕೊಪ್ಪಳ ಜಿಲ್ಲೆಯಲ್ಲಿ ಕೆರೆ ಭರ್ತಿ ಕಾಮಗಾರಿ ಸಮರ್ಪಕವಾಗಿ ನಡೆದಿಲ್ಲ ಕಾರಣ ತ್ವರಿತಗತಿಯಲ್ಲಿ ಕೆರೆ ಭರ್ತಿ ಕಾಮಗಾರಿ ಆರಂಭಿಸಲು ಕೋರಿದರು.

Home add -Advt

*ರಾಜ್ಯದಲ್ಲಿ ಮತ್ತೆ ಮಾಸ್ಕ್ ಕಡ್ಡಾಯ; ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದೇನು?*

https://pragati.taskdun.com/karnataka-covidmask-mandatorydr-sudhakarresponse/

ಕಾಡಾನೆ ದಾಳಿಯಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ ಪರಿಹಾರಧನ ರೂ.15 ಲಕ್ಷಕ್ಕೆ ಹೆಚ್ಚಳ

https://pragati.taskdun.com/the-compensation-given-to-the-families-of-those-killed-in-forest-attacks-has-been-increased-to-rs-15-lakh/

ನಾರಾಯಣಪುರ ಕಾಲುವೆಗಳ ದೋಷ ತಾಂತ್ರಿಕ ತಜ್ಞರ ಸಮಿತಿ ವರದಿ ಪರಿಶೀಲಿಸಿ ಕ್ರಮ

https://pragati.taskdun.com/the-compensation-given-to-the-families-of-those-killed-in-forest-attacks-has-been-increased-to-rs-15-lakh/

Related Articles

Back to top button