Karnataka News

*ಅತ್ಯಾಚಾರ, 2 ಬಾರಿ ಅಬಾರ್ಷನ್: ಕಿರುತೆರೆ ನಟಿಯಿಂದ ನಟನ ವಿರುದ್ಧ ಗಂಭೀರ ಆರೋಪ*

ಪ್ರಗತಿವಾಹಿನಿ ಸುದ್ದಿ: ಕಾಮಿಡಿ ಕಿಲಾಡಿಗಳು, ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಖ್ಯಾತಿಯ ನಟ ಮಡೆನೂರು ಮನು ವಿರುದ್ಧ ಕಿರುತೆರೆ ನಟಿಯೊಬ್ಬರು ಅತ್ಯಾಚಾರ ಆರೋಪ ಮಾಡಿದ್ದಾರೆ.

ಅತ್ಯಾಚಾರದಿಂದ ಎರಡು ಬಾರಿ ಪ್ರಗ್ನೆಂಟ್ ಆಗಿದ್ದಾಗಿಯೂ, ನನ್ನನ್ನು ಬಲವಂತದಿಂದ ತಾಳಿ ಕಟ್ಟಿದ್ದಾಗಿ ಹಾಗೂ ಖಾಸಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು ಹೋಗಿದ್ದಾಗಿ ಯುವತಿ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

2018ರಲ್ಲಿ ಮನುಗೆ ಯುವತಿ ಪರಿಚಯವಾಗಿದೆ. ಬಾಡಿಗೆ ಮನೆಯನ್ನೂ ಯುವತಿಗೆ ಹುಡುಕಿ ಕೊಟ್ಟಿದ್ದನಂತೆ. ಇದೇ ಪರಿಚಯದಿಂದ ಇಬ್ಬರೂ ಕಾಮಿಡಿ ಶೋನಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು. ಆದರೆ ಇದಕ್ಕೂ ಮುನ್ನ ಮನುಗೆ ಮದುವೆಯಾಗಿ ಒಂದು ಮಗು ಕೂಡ ಇದೆ ಎನ್ನಲಾಗಿದೆ. 2022ರ ನವೆಂಬರ್ 29ರಂದು ಮನು ಶಿವಮೊಗ್ಗದ ಶಿಕಾರಿಪುರಕ್ಕೆ ಕಾರ್ಯಕ್ರಮಕ್ಕಗಿ ಕಾಮಿಡಿ ಕಿಲಾಡಿಗಳು ಕಲಾವಿದರನ್ನು ಕರೆದುಕೊಂಡು ಹೋಗಿದ್ದನಂತೆ. ಕಾರ್ಯಕ್ರಮ ಮುಗಿದ ಬಳಿಕ ಯುವತಿ ತಂಗಿದ್ದ ಲಾಡ್ಜ್ ಗೆ ಪೇಮೆಂಟ್ ಕೊಡುವ ನೆಪದಲ್ಲಿ ಬಂದ ಮಡೆನೂರು ಮನು ಯುವತಿಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ದೂರಿದ್ದಾರೆ.

Home add -Advt

ಬಳಿಕ ಆಕೆಯ ಮನೆಯ ಬಳಿ ಬಂದು ಮತ್ತೆ ಬೆದರಿಕೆಯೊಡ್ಡಿ ಅತ್ಯಾಚಾರವೆಸಗಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅತ್ಯಾಚಾರದಿಂದ ಯುವತಿ ಪ್ರಗ್ನೆಂಟ್ ಆಗಿದ್ದು, ಬಳಿಕ ಮನೆಗೆ ಬಂದು ಮನು ಯುವತಿಗೆ ಗರ್ಭಪಾತದ ಮಾತ್ರೆ ನೀಡಿದ್ದನಂತೆ. ಬಳಿಕ ಮತ್ತೆ ಅತ್ಯಾಚಾರ ಮಾಡಿದ್ದು, ಮತ್ತೊಂದು ದಿನ ಬಂದು ಬಲವಂತದಿಂದ ತಾಳಿ ಕಟ್ಟಿ ಹೋಗಿದ್ದನಂತೆ. ಯುವತಿ ಎರಡನೇ ಬಾರಿ ಗರ್ಭಿಣಿಯಾದಾಗಲೂ ಆಕೆಗೆ ಅಬಾರ್ಷನ್ ಮಾಡಿಸಿದ್ದಾನಂತೆ. ಸಿನಿಮಾ ಹಿರೋ ಆಗುವುದಾಗಿ ಹೇಳಿ ಯುವತಿಯಿಂದ ಲಕ್ಷಾಂತರ ರೂಪಾಯಿ ಹಣ ಪಡೆದಿದ್ದಾನೆ. ಇದೆಲ್ಲ ಘಟನೆ ಬಳಿಕ ರಾಜಿಯಾಗಿ ಸುಮ್ಮನಾಗಿದ್ದ ಯುವತಿ ಕೆಲ ದಿನಗಳ ಹಿಂದೆ ಮನು ತನ್ನ ಮನೆಗೆ ಮತ್ತೆ ಬಂದು ಬಲವಂತದಿಂದ ಖಾಸಗಿ ವಿಡಿಯೋ ಮಾಡಿಕೊಂಡು ಬೆದರಿಕೆ ಹಾಕಿ ಹೋಗಿದ್ದಾಗಿ ಆರೋಪಿಸಿದ್ದಾರೆ.

ಯುವತಿ ದೂರಿನ ಹಿನ್ನೆಲೆಯಲ್ಲಿ ಮನು ವಿರುದ್ಧ ಪ್ರಕರಣ ದಾಖಲಾಗಿದ್ದು, ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಮನುನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Related Articles

Back to top button