Kannada NewsKarnataka NewsLatest
ಹರ್ಷ ಹತ್ಯೆ ಪ್ರಕರಣ: ಬೆಳಗಾವಿಯಲ್ಲಿ ನಾಳೆ ಬಜರಂಗದಳ ಪ್ರತಿಭಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಶಿವಮೊಗ್ಗದಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತ ಹರ್ಷ ಕೊಲೆ ಪ್ರಕರಣ ಖಂಡಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಲು ಬಜರಂಗದಳ ನಿರ್ಧರಿಸಿದೆ.
ಬುಧವಾರ (ಫೆ.23) ಬೆಳಗ್ಗೆ 10 ಗಂಟೆಗೆ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಯಲಿದೆ. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಲು ಬಜರಂಗದಳ ನಿರ್ಧರಿಸಿದೆ.
ಭಾನುವಾರ ರಾತ್ರಿ ಶಿವಮೊಗ್ಗದಲ್ಲಿ ಹರ್ಷ ಎನ್ನುವ ಯುವಕನ ಕೊಲೆ ನಡೆದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಹಿಂಸಾಚಾರ ಕೂಡ ನಡೆದಿದೆ. ಕೊಲೆ ಸಂಬಂಧ ಈಗಾಗಲೆ 12ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆೆ.
ಬಜರಂಗದಳ ಕಾರ್ಯಕರ್ತನ ಹತ್ಯೆ ಪ್ರಕರಣ; ಎಲ್ಲಾ 12 ಆರೋಪಿಗಳು ಅರೆಸ್ಟ್
ಭಜರಂಗದಳ ಕಾರ್ಯಕರ್ತನ ಬರ್ಬರ ಹತ್ಯೆ; ಬೆಚ್ಚಿಬಿದ್ದ ಜಿಲ್ಲೆ
ನಾಚಿಕೆ ಆಗ್ತಿದೆ; ಸಿಎಂ ಬೊಮ್ಮಾಯಿಗೆ ಹಿಗ್ಗಾ ಮುಗ್ಗಾ ಝಾಡಿಸಿದ ಪ್ರತಾಪ ಸಿಂಹ



