
ಪ್ರಗತಿವಾಹಿನಿ ಸುದ್ದಿ: ತೆಲಂಗಾಣದಲ್ಲಿ ನಡೆದ ಎರಡು ಪ್ರತ್ಯೇಕ ಅಪಘಾತದಲ್ಲಿ 9 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಆದಿಲಾಬಾದ್ ಹಾಗೂ ನಲ್ಲಗೊಂಡ ಜಿಲ್ಲೆಗಳಲ್ಲಿ ಈ ಅಪಘಾತಗಳು ಸಂಭವಿಸಿವೆ. ಕಾರೊಂದು ನಿಯಂತ್ರಣ ತಪ್ಪಿ ಡಿವೈಡರ್ ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಆದಿಲಾಬಾದ್ ನ ಗುಡಿಹನ್ನೂರು ಮಂಡಲದ ಮೇಕಲಗಂಡಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ಮೊಯಿಸ್, ಅಲಿ, ಖಾಜಾ ಮೊಯಿನುದ್ದೀನ್, ಮೊಹಮ್ಮದ್ ಉಸ್ಮಾನುದ್ದೀನ್ ಹಾಗೂ ಇನ್ನೋರ್ವ ಎಂದು ಗುರುತಿಸಲಾಗಿದೆ.
ಇನ್ನು ನಲ್ಗೊಂಡ ಬಳಿ ಖರೀದಿಗೆಂದು ಹೋಗುತ್ತಿದ್ದವರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮೃತದನ್ನು ಮಲ್ಲಿಕಾಂತಿ ದಿನೇಶ್, ವಲಪುದಾದಾಸು ವಂಶಿ ಹಾಗೂ ಮದ್ಗುಲಪಲ್ಲಿ ಎಂದು ಗುರುತಿಸಲಾದೆ.