Karnataka News

*ಸಿಡಿಲಬ್ಬರಕ್ಕೆ ಮಹಿಳೆಯರು ಸೇರಿ 11 ಜನರು ಬಲಿ*

ಪ್ರಗತಿವಾಹಿನಿ ಸುದ್ದಿ: ಭಾರಿ ಮಳೆಯೊಂದಿಗೆ ಗುಡುಗು-ಸಿಡಿಲಿಗೆ 11 ಜನರು ಮೃತಪಟ್ಟಿರುವ ಘಟನೆ ಒಡಿಶಾದ ವಿವಿಧ ಜಿಲ್ಲೆಗಳಲ್ಲಿ ಸಂಭವಿಸಿದೆ.

ಒಡಿಶಾದ ಒಡಿಶಾದ ಕೊರಾಪುಟ್, ಗಂಜಾಮ್, ಜಾಜ್ ಪುರ, ಧೆಂಕನಲ್, ಬಾಲಾಸೋರ್, ಮಯೂರ್ ಭಂಜ್ ಜಿಲ್ಲೆಗಳಲ್ಲಿ ಸಿಡಿಲಬ್ಬರಕ್ಕೆ ಮೂವರು 6 ಮಹಿಳೆಯರು ಸೇರಿ 11ಜನರು ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಕೊರಾಪುಟ್ ಜಿಲ್ಲೆಯೊಂದರಲ್ಲೇ ನಾಲ್ವರು ಸಾವನ್ನಪ್ಪಿದ್ದಾರೆ. ಒಡಿಶಾದಾದ್ಯಂತ ಗುಡುಗು, ಮಿಂಚು, ಸಿಡಿಲಬ್ಬರದ ಮಳೆಯಾಗುತ್ತಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Home add -Advt

Related Articles

Back to top button