Belagavi NewsBelgaum NewsKannada NewsKarnataka News

*ಲೋಕ ಆದಾಲತ್ ನಲ್ಲಿ ಒಂದಾದ ದಂಪತಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೈಲಹೊಂಗಲ ಪಟ್ಟಣದ ನ್ಯಾಯಾಲಯ ಆವರಣದಲ್ಲಿ ನಡೆದ ಲೋಕ ಅದಾಲತ್‌ನಲ್ಲಿ ಹಲವು ಪ್ರಕರಣಗಳು ರಾಜಿಯಾದವು. ಅದರಲ್ಲಿ ವೈವಾಹಿಕ ಹಕ್ಕುಗಳ ಪುನ‌ರ್ ಸ್ವಾಧಿನತೆಗಾಗಿ ಸಲ್ಲಿಸಿದ ಪ್ರಕರಣವೊಂದು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಂಡಿತು.

ಹಿರಿಯ ದಿವಾಣಿ ನ್ಯಾಯಧೀಶ ರವಿ ಚವ್ಹಾಣ ನೇತೃತ್ವದಲ್ಲಿ ನಡೆದ ಲೋಕ ಆದಾಲತ್‌ನಲ್ಲಿ ಪತಿ-ಪತ್ನಿ ಮಗಳ ಉಜ್ವಲ ಭವಿಷ್ಯಕ್ಕಾಗಿ ಕೂಡಿ ಬಾಳುವ ಇಚ್ಛೆ ವ್ಯಕ್ತಪಡಿಸಿದ್ದರಿಂದ ನ್ಯಾಯಾಧೀಶರು ಹರ್ಷ ವ್ಯಕ್ತಪಡಿಸಿ ಪರಸ್ಪರ ಅವರಿಗೆ ಹೂ ಮಾಲೆ ಹಾಕಿಸಿ, ಸಿಹಿ ತಿನ್ನಿಸಿದರು.

ಅರ್ಜಿದಾರಳ ಪರವಾಗಿ ವಕೀಲ ಆರ್ ಎ ಪಾಟೀಲ, ಎದುರುಗಾರ ಪರ ವಕೀಲ ಆನಂದ ತುರಮರಿ ಸಂಧಾನಕಾರರಾಗಿ ಬಿ ಬಿ ದೋತ್ರದ ವಕಾಲತ್ತು ವಹಿಸಿದ್ದರು. ವಕೀಲರು, ಕಕ್ಷಿದಾರರು ಇದ್ದರು. ಸುಮಾರು 557 ವಿವಿಧ ಪ್ರಕರಣಗಳು ಇತ್ಯರ್ಥಗೊಂಡವು.

Home add -Advt

Related Articles

Back to top button